ಚುನಾವಣಾ ರ್ಯಾಲಿ, ಸಮಾವೇಶಗಳಿಗೆ ಕೊರೊನಾ ಹರಡಲ್ವಾ? ಬಿಎಸ್ವೈಗೆ ಹೆಚ್ಡಿಕೆ ಟಾಂಗ್!

ರಾಜ್ಯದಲ್ಲಿ ಚುನಾವಣೆ ರ್ಯಾಲಿ ಹಾಗೂ ಸಮಾವೇಶಗಳಿಗೆ ಕೊರೊನಾ ಹರಡುವುದಿಲ್ವಾ? ಎನ್ನುವ ಗಂಭೀರವಾದ ಪ್ರಶ್ನೆಯನ್ನು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬಹಾಲಿ ಸಿಎಂಗೆ ಹಾಕಿದ್ದಾರೆ.

ಇಂದು ರಾಮನಗರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕುಮಾರಸ್ವಾಮಿ, ” ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದರೆ ಥಿಯೇಟರ್, ಪಾರ್ಕ್ ಬಂದ್ ಮಾಡ್ತಾರೆ. ಚುನಾವಣಾ ರ್ಯಾಲಿಯಿಂದ ಸಮಾವೇಶದಿಂದಾಗಿ ಕೊರೊನಾ ಹರಡುವುದಿಲ್ವಾ?” ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕೊರೊನಾ ನಿಯಂತ್ರಿಸುವ ನೆಪದಲ್ಲಿ ರಾಜ್ಯ ಸರ್ಕಾರ ಹಣ ದೋಚಿದೆ ಎನ್ನುವ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ” ಆರೋಪ ಮಾಡುವುದು ಸುಲಭ. ಆದರೆ ಅದಕ್ಕೆ ಸಾಕ್ಷಿಗಳು ಬೇಕು. ನಮ್ಮ ಬಳಿ ಎಲ್ಲದಕ್ಕೂ ಸಾಕ್ಷಿಗಳಿವೆ. ಬೇಕಾದ್ರೆ ಪರಿಶೀಲನೆ ಮಾಡಲಿ” ಎಂದಿದ್ದಾರೆ.

ಇದಕ್ಕೆ ಟಾಂಗ್ ಕೊಟ್ಟ ಕುಮಾರಸ್ವಾಮಿ ” ಚುನಾವಣಾ ರ್ಯಾಲಿ, ಸಮಾವೇಶಕ್ಕೆ ಕೊರೊನಾ ಹರಡುವುದಿಲ್ವಾ? ಕೇವಲ ಥಿಯೇಟರ್, ಶಾಲೆಗಳಿಂದ ಮಾತ್ರ ಕೊರೊನಾ ಹರಡುತ್ತಾ?” ಎಂದು ಪ್ರಶ್ನೆ ಮಾಡಿದ್ದಾರೆ.

ಕೊರೊನಾ 2ನೇ ಅಲೆ ಶುರುವಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾ ಪೀಡಿತ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ. ಆದರೆ ಇದೇ ರೀತಿ ಸೋಂಕಿತರ ಸಂಖ್ಯೆ ಹೆಚ್ಛಾಗುತ್ತಲೇ ಇದ್ದರೆ ಒಂದು ವಾರದ ಬಳಿಕ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಸಿಎಂ ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights