Bigg Boss : ಈ ವಾರ ಕಿಚ್ಚನ ಮೆಚ್ಚುಗೆ ಚಪ್ಪಾಳೆ ಯಾರಿಗೆ ಸಿಕ್ಕಿದೆ..?

ಬಿಗ್ ಬಾಸ್ ಮನೆಯಲ್ಲಿ ಯಾರಿಗೆ ಜನ ಜೈ ಅಂತಾರೋ? ಯಾರ ಕೈ ಬಿಡ್ತಾರೋ? ಇದ್ಯಾವುದು ಕೂಡ ಕಲ್ಪನೆಗೆ ಎಟಕದ್ದು. ಇದರ ಮಧ್ಯೆ ಕೆಲ ಸ್ಪರ್ಧಿಗಳು ನೆಚ್ಚಿನ ಸ್ಪರ್ಧಿಯಾಗುತ್ತಾರೆ ಚಪ್ಪಾಳೆ ಹಿಟ್ಟಿಸಿನಿಕೊಳ್ಳುತ್ತಾರೆ.

ಹೌದು.. ಈ ವಾರ ಕಿಚ್ಚನಿಂದ ಮನೆಯ ಓರ್ವ ಸ್ಪರ್ಧಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಇದುವೇ ಅರವಿಂದ್ ಕೆಪಿ. ಅರವಿಂದ್ ಕೆಪಿ ಈ ವಾರದಲ್ಲಿ ತೆಗೆದುಕೊಂಡ ನೇರ ನಿರ್ಧಾರಗಳನ್ನು ಆಧರಿಸಿ ಕಿಚ್ಚ ಸುದೀಪ್ ಅವರಿಂದ ಚಪ್ಪಳೆಗಿಟ್ಟಿಸಿಕೊಂಡಿದ್ದಾರೆ. 

ಈ ವಾರ ನೀಡಲಾಗಿದ್ದ ಬ್ಯಾಟರಿ ಹುಡುಕಾಟದ ಟಾಸ್ಕ್ ನಲ್ಲಿ ಅರವಿಂದ್ ಕೆಪಿ ಮತ್ತು ದಿವ್ಯ ಹುರಡುಗ ಅವರಿಗೆ ವಿಶೇಷ ಬ್ಯಾಟರಿ ಸಿಕ್ಕಿತ್ತು. ಈ ವಿಶೇಷ ಬ್ಯಾಟರಿಯನ್ನು ಅರವಿಂದ್ ಕೆಪಿ ಜೋಡಿ ತಮ್ಮ ಬಳಿ ಇಟ್ಟುಕೊಳ್ಳಬಹುದು ಅಥವಾ ಬಿಗ್ ಬಾಸ್ ಗೆ ವಾಪಸ್ ನೀಡಿ ಮನೆಯ ಸದಸ್ಯರಿಗೆ ಬೆಡ್ ರೂಂ ಪಡೆಯಬಹುದಾಗಿತ್ತು. ಆದರೆ ಆಟವನ್ನು ಗಂಭೀರವಾಗಿ ಪರಿಗಣಿಸಿದ ಅರವಿಂದ್ ಕೆಪಿ ಜೋಡಿ ವಿಶೇಷ ಬ್ಯಾಟರಿಯನ್ನು ತಮ್ಮ ಬಳಿ ಇಟ್ಟುಕೊಂಡು ಟಾಸ್ಕ್ ವಿನ್ ಆದರು. ಇದರಿಂದ ಮನೆಯ ಬಹುತೇಕ ಸದಸ್ಯರ ಬೇಸರಕ್ಕೆ ಗುರಿಯಾದರು. ಮಾತ್ರವಲ್ಲದೇ ಕೆಲ ಸದಸ್ಯರು ಬೆಡ್ ರೂಂ ಕಳೆದುಕೊಂಡಿದ್ದರಿಂದ ಕಣ್ಣೀರಿಟ್ಟರು. 

ಈ ಸಮಯದಲ್ಲಿ ಅರವಿಂದ್ ಕೆಪಿ ಜೋಡಿ ತಾವು ತೆಗೆದುಕೊಂಡ ನಿರ್ಧಾರದಿಂದ ಕ್ಷಮೆಯಾಚಿಸದೆ ತಮ್ಮಿಂದ ಬೇಸರವಾಗಿದ್ದಕ್ಕೆ ಕ್ಷಮೆಯಾಚಿಸಿದರು. ಈ ನಡೆ ಮೆಚ್ಚಿ ನಿರೂಪಕ ಸುದೀಪ್ ಅರವಿಂದ್ ಕೆಪಿಗೆ ಚಪ್ಪಳೆ ಹೊಡೆದರು. ಜೊತೆಗೆ ಅರವಿಂದ್ ಕೆಪಿ ಜೋಡಿ ದಿವಯ ಹುರಡುಗ ಅವರಿಗೂ ಧನ್ಯವಾದ ತಿಳಿಸಿದರು.

ಆದರೆ ಅರವಿಂದ್ ಕೆಪಿ ಜೋಡಿ ನಿರ್ಧಾರದಿಂದ ಮನೆಯ ಸದಸ್ಯರಿಗೆ ಬೇಸರವಾಗಿತ್ತಾದರೂ ಕ್ರಮೇಣ ಅದು ಎಥಾಸ್ಥಿತಿಗೆ ತಲುಪಿದೆ. ಅರವಿಂದ್ ಕೆಪಿಯ ಈ ನಿರ್ಧಾರ ಇನ್ಯಾವ ರೀತಿ ವಾಪಸ್ ಬಾಣವಾಗುತ್ತೋ ಕಾದು ನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights