ಸದನದ 3ನೇ ದಿನವೂ ಸಿಡಿ ವಾರ್ : ಸಿಡಿ ಹಿಡಿದು ಪ್ರತಿಭಟನೆಗೆ ಮುಂದಾದ ‘ಕೈ’ ಪಡೆ…!
ಸದನದ 3ನೇ ದಿನವೂ ಸಿಡಿ ವಾರ್ ಮುಂದುವರೆದಿದ್ದು ಸದನದಲ್ಲಿ ಕಾಂಗ್ರೆಸ್ ಪಡೆ ಸಿಡಿ ಹಿಡಿದು ಪ್ರತಿಭಟನೆಗೆ ಮುಂದಾಗಿದೆ.
ಕಳೆದ ಮೂರು ದಿನದಿಂದ ಸದನದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸ್ಪೋಟಗೊಂಡಿದ್ದು ಸೆಕ್ಷನ್ 376 ಅಡಿ ಪ್ರಕರಣ ದಾಖಲಿಸಬೇಕು ಎಂದು ವಿಪಕ್ಷ ನಾಯಕರು ಒತ್ತಾಯಿಸಿದ್ದಾರೆ. ಈ ವೇಳೆ ಸಿಎಂ ಭಾಷಣದ ನಡುವೆ ಧಿಕ್ಕಾರ ಘೋಷಣೆ ಕೂಗುತ್ತಿದ್ದಾರೆ.
ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆಗೆ ಮುಂದಾಗಿದ್ಧಾರೆ. ಬೇಕೇ ಬೇಕೆ ರಾಜೀನಾಮೆ ಬೇಕು, ಸಿಡಿ ಸರ್ಕಾರಕ್ಕೆ ಧಿಕ್ಕಾರ.. ರಾಸಲೀಲೆ ಸರ್ಕಾರಕ್ಕೆ ಧಿಕ್ಕಾರ… ಮಹಿಳಾ ವಿರೋಧ ಸರ್ಕಾರಕ್ಕೆ ಧಿಕ್ಕಾರ… ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ… ಜನ ವಿರೋಧಿ ಸರ್ಕಾರಕ್ಕೆ ಧಿಕ್ಕಾರ.. ಸಂವಿಧಾನ ವಿರೋಧಕ್ಕೆ, ಮಹಿಳಾ ವಿರೋಧಿ, ನಾಚಿಗೆಟ್ಟ ಸರ್ಕಾರಕ್ಕೆ ಧಿಕ್ಕಾರದ ಘೋಷಣೆ ಕೂಗಿದ್ದಾರೆ.
ಸಿಡಿ ಯುವತಿಯನ್ನು ಪತ್ತೆ ಹಚ್ಚಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತನಿಖೆ ಚುರುಕುಗೊಳ್ಳಬೇಕು. ರಮೇಶ್ ಜಾರಕಿಹೊಳಿ ವಿರುದ್ಧ 376 ಅಡಿ ಪ್ರಕರಣ ದಾಖಲಾಗಬೇಕು. ಮಹಿಳೆಯರಿಗೆ ಗೌರವ ಕೊಡದ ಸರ್ಕಾರ ಇರಬಾರದು, ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದು ವಿಪಕ್ಷ ಸದಸ್ಯರು ಒತ್ತಾಯಿಸಿ ಪ್ರತಿಭಟನೆ ಮುಂದಾಗಿದ್ದಾರೆ.