ರಮೇಶ್ ಜಾರಕಿಹೊಳಿ ಪ್ರಕರಣ: ಸಿಡಿ ಲೇಡಿ ‘ಅಲ್ಲೂ ಇಲ್ಲ – ಎಲ್ಲೂ ಇಲ್ಲಾ’; ಇಲ್ಲೇ ಇದ್ದಾಳೆ!
ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸಿಡಿ ಪ್ರಕರಣದ ಯುವತಿ ಎಲ್ಲಿದ್ದಾಳೆ ಎಂದು ಕಳೆದ 25 ದಿನಗಳಿಂದ ಪೊಲೀಸರು ಹುಡುಕುತ್ತಿದ್ದಾರೆ. ಆಕೆ ಮಾತ್ರವಲ್ಲದೆ, ಪ್ರಕರಣದ ಕಿಂಗ್ಪಿನ್ಗಳು ಎನ್ನಲಾದ ನರೇಶ್ಗೌಡ ಹಾಗೂ ಹ್ಯಾಕರ್ ಶ್ರವಣ್ಗಾಗಿ ಎಸ್ಐಟಿ ಪೊಲೀಸರು ಗೋವಾ, ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ ಸೇರಿದಂತೆ ಹೊರ ರಾಜ್ಯಗಳಲ್ಲೂ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ನರೇಶ್ಗೌಡ ಮತ್ತು ಹ್ಯಾಕರ್ ಉತ್ತರ ಭಾರತದಲ್ಲಿದ್ದಾರೆ ಎನ್ನಲಾಗುತ್ತಿದ್ದು, ಸಿಡಿ ಲೇಡಿ ಮಾತ್ರ ಕರ್ನಾಟಕದಲ್ಲೇ ಇದ್ದಾಳೆ ಎಂಬ ಮಾಹಿತಿ ತಿಳಿದು ಬಂದಿದೆ!
ಇಂದು ಸಿಕ್ಕ ಮಾಹಿತಿ ಪ್ರಕಾರ ಸಿಡಿ ಯುವತಿ ಬೆಂಗಳೂರು ಹೊರಹೊಲಯದಲ್ಲೇ ಇದ್ದಾಳೆ. ಉದ್ಯಮಿ ಶಿವಕುಮಾರ್ ಅವರ ಕಾರು ಚಾಲಕ ಪರಶಿವಮೂರ್ತಿ ಎಂಬಾತ ಈಕೆಯ ಜತೆಯಲ್ಲಿದ್ದಾನೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಆಸುಪಾಸಿನಲ್ಲೇ ಇದ್ದುಕೊಂಡು ಯುವತಿ ಅಲ್ಲಿಂದಲೇ ವಿಡಿಯೋ ಮಾಡಿ ಕಳಿಸುತ್ತಿದ್ದಾಳೆ ಎನ್ನಲಾಗುತ್ತಿದೆ. ರೂಂ ಚೆಕ್ಔಟ್ ಮಾಡಲು ಕೆಲವೇ ಕ್ಷಣ ಇರುವಾಗ ವಿಡಿಯೋ ಮಾಡಿ ಮೊಬೈಲ್ ಮೂಲಕ ಕಳಿಸಿ ಬಳಿಕ ಆಫ್ ಮೊಬೈಲ್ ಅನ್ನು ಆಫ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಇಂದು ಎಸ್ಐಟಿ ವಿಚಾರಣೆಯನ್ನು ಯುವತಿಯ ಪೋಷಕರು ಎದುರಿಸಿದ್ದಾರೆ. ನನ್ನ ಮಗಳು ಅಮಾಯಕಿ, ಆಕೆ ಅಪಾಯದಲ್ಲಿದ್ದಾಳೆ. ಮೊದಲು ಅವಳನ್ನು ರಕ್ಷಿಸಿ. ಅವಳು ಯಾರದ್ದೋ ಮಾತು ಕೇಳುತ್ತಿರಬಹುದು ಎಂದು ಎಸ್ಐಟಿ ಪೊಲೀಸರ ಮುಂದೆ ಸಿಡಿ ಲೇಡಿಯ ತಾಯಿ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ‘ಅಂಥ ಸರ್ಕಾವನ್ನೇ ಬೀಳಿಸಿದ ನನಗೆ ಸಿಡಿ ಲೇಡಿ ದೂರು ಯಾವ ಲೆಕ್ಕ’ – ರಮೇಶ್ ಜಾರಕಿಹೊಳಿ