ಮೈಸೂರು: ಮದುವೆಗೆ ಹೊರಿಟ್ಟ ವಾಹನ ಪಲ್ಟಿ; ಇಬ್ಬರು ಬಾಲಕಿಯರ ದಾರುಣ ಸಾವು!
ಮದುವೆಗಾಗಿ ಹೊರಟಿದ್ದ ಟಾಟಾ ಎಸಿ ಪಲ್ಟಿಯಾಗಿ ಅಪಘಾತಕ್ಕೀಡಾಗಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಬಾಲಕಿರ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೈಸೂರಿನ ಶ್ರೀರಾಮಪುರದಲ್ಲಿರುವ ಕಲ್ಯಾಣ ಮಂಟಪದಲ್ಲಿ ವಿವಾಹವಿತ್ತು. ಅಲ್ಲಿಗೆ ಹೊರಟಿದ್ದ ಟಾಟ ಎಸಿ ಕೆ.ಆರ್ ನಗರ ತಾಲ್ಲೂಕಿನ ಹೊಸೂರು-ಹಳಿಯೂರು ರಸ್ತೆಯಲ್ಲಿ ಭಾನುವಾರ ರಾತ್ರಿ ಅಪಘಾತಕ್ಕೀಡಾಗಿದೆ.
ಕುಪ್ಪೆ ಗ್ರಾಮದಿಂದ ಮದುಮಗಳನ್ನು ಕರೆದುಕೊಂಡು ಹೊರಟಿದ್ದ ಟಾಟ ಎಸಿ ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿದೆ. ಈ ವೇಳೆ ಒಂದೇ ಕುಟುಂಬದ ಇಬ್ಬರು ಬಾಲಕಿಯರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅವರನ್ನು ಕುಪ್ಪೆ ಗ್ರಾಮದ ಕೃಷ್ಣಯ್ಯ ಎಂಬುವವರ ಮಕ್ಕಳಾದ ಪುಷ್ಪಲತಾ (10), ಪಲ್ಲವಿ (9) ಎಂದು ಗುರುತಿಸಲಾಗಿದೆ.
ನಾಲೆಯಲ್ಲಿ ನೀರಿಲ್ಲದ ಕಾರಣ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ. ವಾಹನದಲ್ಲಿದ್ದ ಮದುಮಗಳು ಅಪಾಯದಿಂದ ಪಾರಾಗಿದ್ದಾರೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಮಹಿಳೆಯರ ಮೇಲೆ ಗ್ಯಾಂಗ್ರೇಪ್; ಸಂಬಂಧಿಕರನ್ನೇ ಅತ್ಯಾಚಾರ ಎಸಗಲು ಬೆದರಿಕೆ; ರಣರಂಗವಾಗಿದೆ ಇಥಿಯೋಪಿಯಾ