ರಾಜ್ಯದಲ್ಲಿ ಹೊಸದಾಗಿ 50,000 ಕ್ಕೂ ಹೆಚ್ಚು ಕೊರೊನಾ ಕೇಸ್ : 346 ಜನ ಬಲಿ..!

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ 50,000 ಕ್ಕೂ ಹೆಚ್ಚು ಕೊರೊನಾ  ಕೇಸ್ ದಾಖಲಾಗಿದ್ದು, 346 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ಪ್ರಕಾರ, ಇಂದು ರಾಜ್ಯದಲ್ಲಿ 50,112 ಹೊಸ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 23,106 ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. 346 ಏಕದಿನ ಸಾವಿನ ಸಂಖ್ಯೆಯಲ್ಲಿ 161 ಸಾವುಗಳು ಬೆಂಗಳೂರಿನಲ್ಲೇ ಸಂಭವಿಸಿವೆ.

ಇದರ ನಡುವೆ ಮತ್ತೊಂದು ಆತಂಕಕಾರಿ ವಿಚಾರ ಬಯಲಾಗಿದೆ. ಕೋವಿಡ್ ಮೂರನೇ ಅಲೆ ಅನಿವಾರ್ಯ ಎಂದು ಕೇಂದ್ರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯರಾಘವನ್ ಎಚ್ಚರಿಸಿದ್ದಾರೆ. ಆದರೆ ಈ ಕೊರೊನಾ ಮೂರನೇ ಅಲೆ ಯಾವ ಪ್ರಮಾಣದಲ್ಲಿ ಸಂಭವಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಪ್ರಸ್ತುತ ರೂಪಾಂತರಗಳ ವಿರುದ್ಧ ಲಸಿಕೆಗಳು ಪರಿಣಾಮಕಾರಿಯಾಗಿ ನೀಡಲಾಗುತ್ತಿದೆ. ಆದರೂ ಹೊಸ ರೂಪಾಂತರಗಳು ಪ್ರಪಂಚದಾದ್ಯಂತ ಮತ್ತು ಭಾರತದಲ್ಲಿಯೂ ಉದ್ಭವಿಸುತ್ತಿವೆ. ರೋಗನಿರೋಧಕ ತಪ್ಪಿಸುವ ರೂಪಾಂತರಿ ಕೊರೊನಾ ರೋಗದ ತೀವ್ರತೆಯನ್ನುಹೆಚ್ಚಿಸುತ್ತಿದೆ ”ಎಂದು ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights