ಕೊನೆಗೂ ಸಿಡಿಯಲ್ಲಿರೋದು ನಾನೇ ಎಂದು ಒಪ್ಪಿಕೊಂಡ ರಮೇಶ್ ಜಾರಕಿಹೊಳಿ..!
ಪೊಲೀಸ್ ತನಿಖಾಧಿಕಾರಿ ಮುಂದೆ ಸಿಡಿಯಲ್ಲಿರೋದು ನಾನೇ ಎಂದು ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದು ಸದ್ಯ ಸಿಡಿ ವಿಚಾರ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ.
ಹೌದು… ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವಿಚಾರಣೆಯಲ್ಲಿ ಕೊನೆಗೂ ಸಾಹುಕಾರ್ ಸಿಡಿಯಲ್ಲಿರುವುದು ನಾನೇ ಎಂದು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಂತ್ರಸ್ತೆ ಪರ ವಕೀಲ ಜಗದೀಶ್, ” ಪ್ರಾಜೆಕ್ಟ್ ವಿಚಾರದಲ್ಲಿ ಯುವತಿ ನನ್ನನ್ನು ಭೇಟಿಯಾಗಿದ್ದಳು. ಸಿಡಿಯಲ್ಲಿರೋದು ನಾನೇ ಎಂದು ರಮೇಶ್ ಜಾರಕಿಹೊಳಿ ಪೊಲೀಸ್ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆಂದು” ಬಹಿರಂಗಗೊಳಿಸಿದ್ದಾರೆ.
ಕೆಲಸ ಕೊಡಿಸುವುದಾಗಿ ಹೇಳಿ ನನ್ನನ್ನು ಬಳಿಸಿಕೊಂಡಿದ್ದಾರೆಂದು ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಯುವತಿ ದೂರು ನೀಡಿದ್ದಳು. ಇನ್ನೂ ಸಿಡಿ ಬಿಡುಗಡೆಯಾದಾಗಿನಿಂದಲೂ ಸಿಡಿಯಲ್ಲಿರುವ ವ್ಯಕ್ತಿ ನಾನಲ್ಲ ಎಂದು ಹೇಳಿಕೊಂಡೇ ಬರುತ್ತಿದ್ದ ರಮೇಶ್ ಕೊನೆಗೂ ತಾವೇ ಸಿಡಿಯಲ್ಲಿರುವ ವ್ಯಕ್ತಿ ಎಂದು ಒಪ್ಪಿಕೊಂಡಿದ್ದಾರೆ.
ಹಾಗಾದರೆ ಸಿಡಿ ಸಂತ್ರಸ್ತೆಗೆ ಮೋಸ ಆಗಿರುವುದು ನಿಜಾನಾ..? ಮುಂದಿನ ಕ್ರಮ ಏನು..? ಸಿಡಿ ತಯಾರಿಸಿದವರು ಯಾರು ಎನ್ನುವ ಬಗ್ಗೆ ಇನ್ನಷ್ಟು ತನಿಖೆ ನಡೆಯಬೇಕಿದೆ.