ಯಡಿಯೂರಪ್ಪ ಮಹಾನ್ ಸುಳ್ಳುಗಾರ – ದ್ವೇಷದ ವ್ಯಕ್ತಿ: ಹೆಚ್ಡಿ ರೇವಣ್ಣ
ಹಾಸನದ ಬೂವನಹಳ್ಳಿ ವಿಮಾನನಿಲ್ದಾಣ ಕಾಮಗಾರಿ ಪ್ರಾರಂಭಕ್ಕೂ ಮುನ್ನವೇ ರಾಜಕೀಯ ಧ್ವೇಷ ಮಾಡಲಾಗುತ್ತಿದೆ. ಈ ರಾಜ್ಯದಲ್ಲಿ ಇದೂವರೆಗೂ ಸುಳ್ಳು-ದ್ವೇಷ ಮಾಡುವ ಮುಖ್ಯಮಂತ್ರಿಯನ್ನು ನಾನು ಕಂಡಿದ್ದರೆ ಅದು ಯಡಿಯೂರಪ್ಪ ಮಾತ್ರ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ವಿಮಾನ ನಿಲ್ದಾಣದ ಕಾಮಗಾರಿಯನ್ನು ಮೂಲ ಸೌಕರ್ಯ ಇಲಾಖೆಗೆ ನೀಡಿರುವ ಸರ್ಕಾರ ನಾಮಕಾವಸ್ತೆ ಕಾಮಗಾರಿ ಮಾಡಲು ಹೊರಟಿದ್ದಾರೆ. ಬಿಜಾಪುರ, ಶಿವಮೊಗ್ಗ ಜಿಲ್ಲೆಯಲ್ಲಿ ಮಾಡಿದಂತೆ ಆದಷ್ಟು ಬೇಗ ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮೂಲಕ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹಾಸನ ವಿಮಾನ ನಿಲ್ದಾಣಕ್ಕಾಗಿ ಸದ್ಯ 536 ಎಕರೆ ಭೂ ಸ್ವಾಧೀನ ಆಗಿದೆ, ಬಾಕಿ 219 ಬೇಕಿದೆ. ಆದರೆ ಸರ್ಕಾರ ಕೇವಲ 24 ಎಕರೆ ಮಾತ್ರ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದು, ಕೇವಲ 13 ಕೋಟಿ ಬಿಡುಗಡೆ ಮಾಡಿದೆ ಎಂದಿದ್ದಾರೆ.
ನಾನು ಲೋಕೋಪಯೋಗಿ ಸಚಿವನಾಗಿದ್ದಾಗ, ಹಾಸನ ವಿಮಾನ ನಿಲ್ದಾಣದ ಜೊತೆಗೆ ಟ್ರೈನಿಂಗ್ ಇನ್ಸ್ಟಿಟ್ಯೂಟ್ಅನ್ನೂ ಆರಂಭಿಸಲು ಉದ್ದೇಶಿಸಲಾಗಿತ್ತು. ಅದಕ್ಕಾಗಿ 1200 ಕೋಟಿ ರೂಗಳ ಜುಪಿಟರ್ ಏವಿಯೇಷನ್ ಮೂಲಕ ಕಾಮಗಾರ ನಡೆಸುಲು ನಿರ್ಧರಿಸಿದ್ದೆವು. ಆದರೆ, ಯಡಿಯೂರಪ್ಪ ಅವರು ಅದೆಲ್ಲವನ್ನೂ ತಡೆಹಿಡಿದ್ದಾರೆ. ಅಲ್ಲದೆ, ಕಾಮಗಾರಿಯನ್ನು ಬೇರೆ ಇಲಾಖೆಗೆ ನೀಡಿದ್ದು, ನಾಮಕಾವಸ್ತೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇಂತಹ ದ್ವೇಷ ರಾಜಕೀಯ ಮಾಡಿದವರನ್ನು ನಾನು ಹಿಂದೆಂದೂ ನೋಡಿಲ್ಲ. ಅವರು 2023 ರ ಚುನಾವಣೆಯಲ್ಲಿ ಎಷ್ಟು ಸ್ಥಾನ ಪಡೆಯುತ್ತಾರೆ ನೋಡುತ್ತೇನೆ. ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾಜಿ ಶಾಸಕ ವೈಎಸ್ವಿ ದತ್ತ ಮೌನ ಪ್ರತಿಭಟನೆ!