Bigg Boss: ಟಾಸ್ಕ್ ನಲ್ಲಿ ಗೆದ್ದ ಹಣವನ್ನ ಮಂಜುಗೆ ಕೊಟ್ಟ ದಿವ್ಯ ಸುರೇಶ್…!
ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಜೊತೆ ಜೊತೆಯಾಗಿ ಆಟ ಆಡುತ್ತಿರುವ ಜೋಡಿ ಅಂದ್ರೆ ಅದು ಮಂಜು ಪಾವಗಡ ಮತ್ತು ದಿವ್ಯ ಸುರೇಶ್ ಅಂತಲೇ ಜನ ಮಾತನಾಡಿಕೊಳ್ಳುತ್ತಾರೆ. ಇದಕ್ಕೆ ಪುಷ್ಠಿ ನೀಡುವಂತೆ ಮತ್ತೆ ದಿವ್ಯ ಸುರೇಶ್ ತಾವು ಟಾಸ್ಕ್ ನಲ್ಲಿ ಗೆದ್ದ ಹಣವನ್ನ ಮಂಜುಗೆ ಕೊಟ್ಟಿದ್ದಾರೆ.
ಹೌದು… ನಿನ್ನೆ ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿ ದಿವ್ಯ ಸುರೇಶ್ ಹೆಚ್ಚು ಹಣ ಸಂಗ್ರಹಿಸಿದ್ದರು. ಆ ಹಣವನ್ನು ಬೇರೆಯವರು ಕದಿಯದಂತೆ ಹರಿಯದಂತೆ ಜೊತೆಗೆ ತಮ್ಮ ತಲೆಗೆ ಚಿನ್ನದ ಮೊಟ್ಟೆಯನ್ನು ಹೊಡೆಯದಂತೆ ನೋಡಿಕೊಳ್ಳಬೇಕಿತ್ತು. ಒಂದು ವೇಳೆ ಚಿನ್ನದ ಮೊಟ್ಟೆಯನ್ನು ಯಾರು ಹೊಡೆಸಿಕೊಳ್ಳುತ್ತಾರೋ ಅವರು ಮೊಟ್ಟೆ ಹೊಡೆದವರಿಗೆ ತಮ್ಮ ಬಳಿ ಇದ್ದ ಎಲ್ಲಾ ಹಣವನ್ನು ಕೊಡಬೇಕು. ಇದರೊಂದಿಗೆ ಹಣ ಸಂಗ್ರಹಿಸಲು ಬಿಗ್ ಬಾಸ್ ಕೆಲವೊಂದು ಟಾಸ್ಕ್ ನ್ನು ನೀಡುತ್ತಲೇ ಇದ್ದರು. ಮನೆಯ ಸದಸ್ಯರು ಗೆದ್ದ ಹಣವನ್ನು ಬಿಗ್ ಬಾಸ್ ನೀಡಿದ ಪೆಟ್ಟಿಗೆಯಲ್ಲಿ ಇಡಬೇಕು. ಜೊತೆಗೆ ಅದನ್ನು ಯಾರೂ ಕದಿಯದಂತೆ, ಹರಿಯದಂತೆ ನೋಡಿಕೊಳ್ಳಬೇಕು.
ಮೊಟ್ಟೆ ಹೊಡೆಯುವುದರಿಂದ ತಪ್ಪಿಸಿಕೊಳ್ಳಬೇಕಾಗಿದ್ದ ದಿವ್ಯ ತಾವೇ ಸ್ವ ಇಚ್ಚೆಯಿಂದಮಂಜು ಕೈಯಿಂದ ಚಿನ್ನದ ಮೊಟ್ಟೆಯನ್ನು ಹೊಡೆಸಿಕೊಂಡು ತಮ್ಮ ಅಷ್ಟು ಹಣವನ್ನು ಮಂಜುಗೆ ನೀಡಿದ್ದಾರೆ.
ಇದಕ್ಕೆ ಕಾರಣ ಕೇಳಿದ ಪ್ರಶಾಂತ್ ಸಂಬರಗಿಗೆ ದಿವ್ಯ ಸುರೇಶ್ ಉತ್ತರ ಕೊಟ್ಟಿದ್ದಾರೆ. ನನ್ನ ಬಳಿ ಹಣ ಇದ್ದರೆ ನಾನು ಬೇರೆಯವರ ಹಣ ಕದಿಯಲು ಆಗುವುದಿಲ್ಲ. ಬೇರೆಯವರ ಹಣ ಕದ್ದರೆ ನನ್ನ ಹಣವನ್ನ ಅವರು ಕದಿಯುತ್ತಾರೆ. ಹೀಗಾಗಿ ಮಂಜು ಬಳಿ ನನ್ನ ಹಣ ಕೊಟ್ಟಿದ್ದೇನೆ. ನಾನು ಈಗ ಧೈರ್ಯವಾಗಿ ಬೇರೆಯವರ ಹಣವನ್ನು ಕದಿಯುತ್ತೇನೆ ಎಂದು ಹೇಳಿದ್ದಾರೆ.
ಈ ರೀತಿ ಫೇವರ್ ಗೇಮ್ ಬಗ್ಗೆ ಮನೆಯಲ್ಲಿ ಪ್ರಿಯಾಂಕ ಸೇರಿದಂತೆ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ದಿವ್ಯ ಸುರೇಶ್ ಕ್ಯಾಪ್ಟನ್ ಟಾಸ್ಕ್ ನಲ್ಲಿ ಭಾಗವಹಿಸುವ ಆಸೆಯಿಂದ ಸುಮಾರು ಕಸರತ್ತುಗಳನ್ನ ಮಾಡುತ್ತಿದ್ದಾರೆ. ಈ ಪ್ಲ್ಯಾನ್ ಗಳು ದಿವ್ಯಳಿಗೆ ಕ್ಯಾಪ್ಟನ್ ಆಗಲು ನೆರವಾಗುತ್ತಾ ಕಾದು ನೋಡಬೇಕಿದೆ.