ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 36 ವರ್ಷ; ಮನುವಾದಿಗಳ ಅಟ್ಟಹಾಸಕ್ಕೆ ಬೀಳದ ಕಡಿವಾಣ!

ದಲಿತರ ಮೇಲೆ ನಡೆದ ಅಮಾನುಷ ಹಲ್ಲೆಗಳಲ್ಲಿ ಒಂದಾದ ಕಾರಂಚೇಡು ಘಟನೆಗೆ ಇಂದಿಗೆ (ಜುಲೈ 17) 36 ವರ್ಷ. ಮನುವಾದದ ವಿಷ ಬೀಜಗಳನ್ನು ನಿಧಾನಗತಿಯಲ್ಲಿ ಮೈ ಮನಸಲ್ಲಿ ಹರಡುವಂತೆ ಮಾಡುವಲ್ಲಿ ಬ್ರಾಹ್ಮಣ್ಯ ಕೆಲಸ ಮಾಡಿದೆ ಎನ್ನಲು ಈ ಭೀಕರ ಘಟನೆಗಳೇ ಸಾಕ್ಷ್ಯಗಳಾಗಿವೆ. ಅಶ್ಪಶ್ಯರನ್ನು ತಮ್ಮ ಭೂಮಿಗಳಲ್ಲಿ ದುಡಿಸಿಕೊಂಡು ಮೆರೆದ ಭೂಮಾಲಿಕರು ಎಂದೆದಿಂದಿಗೂ ದಲಿತರು ತಮ್ಮ ಕಾಲ ಕೆಳಗೆ ಇರಬೇಕೆಂದು ಶತ ಶತಮಾನಗಳಿಂದ ಬಯಸಿದ್ದರು.

ಆಂಧ್ರ- ತೆಲಂಗಾಣಗಳಲ್ಲಿ ಸಾವಿರಗಟ್ಟಲೆ ಎಕರೆಗಳ ಮಾಲೀಕರಾದ ಮೇಲ್ಜಾತಿಯ ಜನ ಕೆಳವರ್ಗದವರನ್ನು ಜೀತದಾಳುಗಳಾಗಿರಿಸಿಕೊಂಡು, ಅವರಿಗೆ ಒಂದಿಂಚೂ ಭೂಮಿಯ ಹೊಡೆತನ ನೀಡದೆ ಶೋಷಣೆ ಮಾಡಿದ್ದರು (ಈಗ ಭೂಮಿಯಿದೆ ಆದರೆ, ಶೋಷಣೆ ನಿಂತಿಲ್ಲ). ಇಂತಹ ಭಯಾನಕವಾದ ಸಮಯದಲ್ಲೂ ಶೋಷಣೆಯ ವಿರುದ್ಧ ಸಿಡಿದೆದ್ದ ಸಾಕಷ್ಟು ಜನ ಹೋರಾಟಗರರು ಅಮರರಾಗಿದ್ದಾರೆ.  ದಲಿತರ ಮೇಲಿನ ಶೋಷಣೆಯನ್ನು ಪ್ರಶ್ನಿಸಿದ್ದಕ್ಕಾಗಿ ನಡೆದ ಕಾರಂಚೇಡು ದಲಿತರ ಮೇಲಿನ ಹತ್ಯಾಕಾಂಡಕ್ಕೆ ಇಂದಿಗೆ 36 ವರ್ಷ.

1985, ಆಗಿನ ವಿಶಾಲ ಆಂಧ್ರಪ್ರದೇಶದಲ್ಲಿನ ಪ್ರಕಾಶಂ ಜಿಲ್ಲೆಯ ಕಾರಂಚೇಡು ಎಂಬ ಗ್ರಾಮದಲ್ಲಿ ದಲಿತರು ಮತ್ತು ಮೇಲ್ಜಾತಿಯ ಜನಕ್ಕೆ ಪ್ರತ್ಯೇಕವಾಗಿ ಎರಡು ಕೆರೆಗಳನ್ನು ಮಾಡಿಕೊಂಡಿದ್ದರು. ದಲಿತ ಸಮುದಾಯದ ಮಾದಿಗ ಜನಾಂಗದ ಜನ ತಮ್ಮ ಕೆರಯ ನೀರನ್ನು ಕುಡಿಯಲೂ ಸಹ ಬಳಸುತ್ತಿದ್ದರಿಂದ  ಅದನ್ನು ಶುಚಿಯಾಗಿ ಇಟ್ಟುಕೊಂಡಿದ್ದರು. 35 ವರ್ಷಗಳ ಹಿಂದೆ 1985 ಜುಲೈ 16ರಂದು ಕಮ್ಮ ಜಾತಿಗೆ ಸೇರಿದ ಕೊಳಕು ಮನಸ್ಸಿನ ಸವರ್ಣೀಯನೊಬ್ಬ ದಲಿತರ ಕುಡಿಯುವ ನೀರಿನ ಕೆರೆಗೆ ‘ದನಗಳನ್ನು ಇಳಿಸಿ, ಅವುಗಳ ಮೈ ತೊಳೆದು, ಅವು ಕುಡಿದು ಉಳಿದ ಮುಸುರೆ ನೀರನ್ನು ಸುರಿದ’.

ಇದನ್ನು  ಕಂಡು ಮಾದಿಗ ಜನಾಂಗದ ಯುವಕರು ಈ ರೀತಿ ಮಾಡಿದರೆ ನಾವು ನೀರು ಕುಡಿಯುವುದು ಹೇಗೆ ಎಂದು ಪ್ರಶ್ನಿಸಿದ್ದ. ಆತ ಪ್ರಶ್ನೆ ಕೇಳಿದ್ದಕ್ಕಾಗಿ ಕೆಳಜಾತಿಯವನಾಗಿ ನನಗೆ ಪ್ರಶ್ನೆ ಮಾಡುತ್ತಿಯ ಎಂದು ಜಗಳ ತೆಗೆದ. ನಂತರ ತನ್ನ ಜಾತಿಯವರನ್ನು  ಸೇರಿಸಿ ನಡೆದ ಘಟನೆಯನ್ನು ಚರ್ಚೆ ಮಾಡಿದ, ಆಗ ಕಮ್ಮ ಮೇಲ್ಜಾತಿಯ ಭೂಮಾಲಿಕರು ದಲಿತರನ್ನು ಹೀಗೆ ಬಿಟ್ಟರೆ ಬೆಳೆದು ಬಿಡುತ್ತಾರೆ. ನಾವು ಅವರನ್ನು ಸುಮ್ಮನೆ  ಬಿಡಬಾರದು ಎಂದು ರಾತ್ರಿಯೇ ಯೋಜನೆ ರೂಪಿಸಿದ್ದರು.

ಇದನ್ನೂ ಓದಿ: ಅನಾರೋಗ್ಯ ಕಾರಣ ಮುಂದಿಟ್ಟು ರಾಜೀನಾಮೆ ನೀಡಲಿದ್ದಾರೆ ಯಡಿಯೂರಪ್ಪ?; ವರದಿ ಅಲ್ಲಗಳೆದ ಬಿಎಸ್‌ವೈ

1985 ಜುಲೈ 17ರ ಬೆಳಗಿನ ಜಾವ ಕೈಗೆ ಸಿಕ್ಕ ಕತ್ತಿ,ಕೊಡಲಿ,  ಮಾರಣಾಯುಧಗಳೊಂದಿಗೆ ಟ್ರಾಕ್ಟರ್ ಗಳಲ್ಲಿ ಬಂದ ಸವರ್ಣೀಯರು, ಮಾದಿಗ ಸಮುದಾಯದ ದಲಿತರನ್ನು ಒಡಿಡಾಡಿಸಿ ಭಯಾನಕವಾಗಿ ದಾಳಿ ಮಾಡಿದರು. ಸಿಕ್ಕಸಿಕ್ಕವರನ್ನು ಕತ್ತರಿಸಿ ಹಾಕಿದರು. ಸಾಕಷ್ಟು ಜನ ಹೆಣ್ಣು ಮಕ್ಕಳನ್ನು ಅಮಾನುಷವಾಗಿ ಅತ್ಯಾಚಾರವೆಸಗಿದರು. ಈ ದುರ್ಘಟನೆಯಲ್ಲಿ ತೆಳ್ಳ ಯೋಹೌಷುವ, ದುಡ್ಡು ವಂದನಂ, ತೆಳ್ಳ ಮುತ್ತಯ್ಯ, ದುಡ್ಡು ರಮೇಶ್, ತೆಳ್ಳ ಮಾಷೆ, ದುಡ್ಡು ಅಬ್ರಹಾಂ ಎಂಬ ಆರು ಜನ ಅಲ್ಲಿಯೇ ಕೊಲೆಯಾಗಿ ಹೋದರು. 20ಕ್ಕೂ ಹೆಚ್ಚು ಜನ  ಗಂಬೀರ ಗಾಯಗಳಿಗೆ ತುತ್ತಾದರು. ಕಣ್ಣೆದುರೇ ಮಗನನ್ನು ಕಳೆದುಕೊಂಡ ಪ್ರತ್ಯಕ್ಷ ಸಾಕ್ಷಿ ದುಡ್ಡು ಆಲಿಸಮ್ಮನನ್ನು  ಎರಡು ವರ್ಷಗಳ ನಂತರ ಕೊಲೆ ಮಾಡಿದರು.

ಈ ಘಟನೆ ದೇಶದ ಪ್ರಜ್ಞಾವಂತರ, ಮಾನವತವಾದಿಗಳು, ದಲಿತ  ಸಂಘಟನೆಗಳ  ಆಕ್ರೋಷಕ್ಕೆ ಕಾರಣವಾಗಿ ಬೃಹತ್ ಪ್ರತಿಭಟನೆಗಳು ನಡೆದವು. ಸತತವಾಗಿ ಆರು ತಿಂಗಳ ಕಾಲ ಪ್ರತಿಭಟನೆಗಳು ನಡೆದವು.  ಈ ಕಾರಂಚೇಡು ಹೋರಾಟ ಬಹಳಷ್ಟು ಕಾನೂನುಗಳನ್ನು ರೂಪಿಸಲು ಕೂಡ ಕಾರಣವಾಯಿತು ಎಂದು ಕೂಡ ಹೇಳಲಾಗುತ್ತದೆ.  1989 ಎಸ್ಸಿ, ಎಸ್ಟಿ ದೌರ್ಜನ್ಯ ವಿರೋಧಿ ಕಾಯ್ದೆ ಬರಲು ಕೂಡ ಈ ಹೋರಾಟದ ಹಿನ್ನೆಲೆ ಇದೆ ಎನ್ನಲಾಗಿದೆ.

ಈ ಹಲ್ಲೆಯಲ್ಲಿ ಭಾಗಿದಾರರಾದ  ಆರೋಪಿಗಳ ಮೇಲೆ ಪೋಲೀಸರು ಕೇಸು ನಮೂದಿಸಿರಲಿಲ್ಲ. ಆದರೆ ಹೋರಾಟಗಾರು ಕೋರ್ಟಿಗೆ ಹೋದ ನಂತರ 9 ಸೆಕ್ಷನ್ಗಳ ಕೆಳಗೆ 90 ಜನರನ್ನು ಆರೋಪಿಗಳನ್ನಾಗಿ ಮಾಡಿ ಚಾರ್ಜ್ ಶೀಟ್ ಹಾಕಿದರು. 1994ರ ಅಕ್ಟೋಬರ್ 30 ರಂದು ಐದು ಜನರಿಗೆ ಜೀವಾವಧಿ ಶಿಕ್ಷೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ನಾಲ್ಕು ಜನ ವೃದ್ದರಿಗೆ  1000ರೂ ದಂಡ ಹಾಗೂ 46 ಜನರಿಗೆ ತಲಾ 3 ವರ್ಷ ಜೈಲು ಶಿಕ್ಷೆ ವಿಧಿಸಿತು. ಆಗ ಶಿಕ್ಷಗೆ ಒಳಗಾದಂತಹ   ಎಲ್ಲರೂ ಹೈಕೋರ್ಟಿಗೆ ಅರ್ಜಿ ಹಾಕಿಕೊಂಡಾಗ, 1998 ಜುಲೈ 24ರಂದು ತೀರ್ಪಿನಲ್ಲಿ ಬೆನಿಫಿಟ್ ಆಫ್ ಡೌಟ್ ಅಡಿಯಲ್ಲಿ ಶಿಕ್ಷೆ ರದ್ದುಗೊಳಿಸಲಾಯಿತು.

ಹೋರಾಟಗಾರರ ಸತತ ಪ್ರಯತ್ನದಿಂದ ಅಂತಿಮವಾಗಿ ಸುಪ್ರೀಂಕೋರ್ಟಿನಲ್ಲಿ 1998ರಲ್ಲಿ ಸ್ಪಷಲ್ ಲೀವ್ ಪಿಟಿಷನ್ ದಾಖಲು ಮಾಡಲಾಯಿತು. ಹತ್ತು ವರ್ಷಗಳ ನಂತರ 2008 ಡಿಸೆಂಬರ್ 19ರಂದು ಸುಪ್ರೀಂಕೋರ್ಟ್ ಅಂಜಯ್ಯ ಎಂಬುವವರಿಗೆ ಜೀವಾವದಿ ಶಿಕ್ಷೆ ಮತ್ತು 29 ಮಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ಎಲ್ಲಾ ದಲಿತ ದಮನಿತರ ಮೇಲಿನ ದೌರ್ಜನ್ಯದ ಕೇಸುಗಳು ಸಹ ಇಷ್ಟೇ ದುಡ್ಡಿರುವ ಮೇಲ್ಜಾತಿಯ ಜನ ಎಲ್ಲಿಬೇಕಾದರೂ ಗೆದ್ದು ಬರುತ್ತಾರೆ. ಹೀಗೆ ನಿರಂತರವಾಗಿ ಇಂದಿಗೂ ಸಹ ದಲಿತರ ಮೇಲೆ ದೌರಜನ್ಯಗಳು ನಡೆಯುತ್ತಲೇ ಬಂದಿವೆ. ದಲಿತರ ಮೇಲಿನ ಸವರ್ಣಿಯರ ದೌರ್ಜನ್ಯಕ್ಕೆ, ಅಟ್ಟಹಾಸಕ್ಕೆ ಇಂದಿಗೂ ಕಣಿವಾಣ ಹಾಕಲು ಸಾಧ್ಯವಾಗಿಲ್ಲ.  ಡಾ. ಬಾಬಾ ಸಾಹೇಬರ ಶಿಕ್ಷಣ, ಸಂಘಟನೆ , ಹೋರಾಟದ ಮೂಲಕ ಬರುವ ಬದಲಾವಣೆಯೇ ದಲಿತರನ್ನು ಶೋಷಣೆಯ ಸಮುದ್ರದಿಂದ ಆಚೆ ತೆಗೆದು ದಡ ಸೇರಿಸಬಲ್ಲದು.

– ಅನಿಲ್‌ ಕುಮಾರ್ ಚಿಕ್ಕದಾಳವಟ್ಟ

ಇದನ್ನೂ ಓದಿ: 15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರ ಪಟ್ಟಿ ಕೇಳಿದ ತಾಲಿಬಾನ್; ಮದುವೆಗೆ ಒತ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights