‘ರಾಜೀನಾಮೆ ಕೊಡೋ ಮಾತಿಲ್ಲ’ ದೆಹಲಿಯಿಂದಲೇ ವಿರೋಧಿ ಬಣಕ್ಕೆ ಬಿಎಸ್ವೈ ಖಡಕ್ ಸಂದೇಶ!
‘ನಾನು ಕುರ್ಚಿಗಟ್ಟಿಕೊಂಡು ಕುಳಿತಿಲ್ಲ. ಹೈಕಮಾಂಡ್ ಹೇಳಿದಾಗ ಅಧಿಕಾರದಿಂದ ದೂರ ಸರಿಯುತ್ತೇನೆ’ ಎಂದು ಹೇಳಿದ್ದ ಸಿಎಂ ಯಡಿಯೂರಪ್ಪ ದೆಹಲಿಯಿಂದಲೇ ವಿರೋಧಿ ಬಣಕ್ಕೆ ಬಿಎಸ್ವೈ ಖಡಕ್ ಸಂದೇಶ ಕೊಟ್ಟಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ನಾನು ರಾಜೀನಾಮೆ ನೀಡುವ ವಿಚಾರ ಶುದ್ಧ ಸುಳ್ಳು. ನಾನು ನಿನ್ನೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಮಾತನಾಡಿದ್ದೇನೆ. ಹೈಕಮಾಂಡ್ ರಾಜೀನಾಮೆ ಕೊಡಿ ಎಂದು ಕೇಳಿಲ್ಲ. ಹೀಗಾಗಿ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಆಗಸ್ಟ್ ಮೊದಲ ವಾರದಲ್ಲಿ ಮತ್ತೆ ದೆಹಲಿಗೆ ಭೇಟಿ ನೀಡುವೆ” ಎಂದು ರಾಜೀನಾಮೆ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.
ಹಲವಾರು ದಿನಗಳಿಂದ ವಿರೋಧ ಪಕ್ಷದವರು ಮಾತ್ರವಲ್ಲದೇ ಸ್ವಪಕ್ಷದವಾದ ಬಸನಗೌಡ ಯತ್ನಾಳ್ ಸಿಎಂ ಬದಲಾವಣೆ ಖಚಿತ ಎನ್ನುವ ಹೇಳಿಕೆಯನ್ನು ಪದೇ ಪದೇ ಪ್ರಸ್ತಾಪಿಸಿದ್ರು. ಇವರೊಂದಿಗೆ ಸಿಪಿ ಯೋಗೇಶ್ವರ್ ಹಾಗೂ ಹೆಚ್ ವಿಶ್ವನಾಥ್ ಕೂಡ ಈ ಬಗ್ಗೆ ಪ್ರಸ್ತಾಪಿಸಿರುವುದುಂಟು.
ಹೀಗಾಗಿ ಪಕ್ಷದಲ್ಲಿ ಅಭದ್ರತೆ ಕಂಡುಬಂದಿತ್ತು. ಇದಕ್ಕೆ ಇಂದು ಸಿಎಂ ದೆಹಲಿಯಿಂದಲೇ ಖಡಕ್ ಸಂದೇಶ ಕೊಟ್ಟಿದ್ದಾರೆ. ರಾಜೀನಾಮೆ ಕೊಟುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬದಲಾವಣೆ ವಿಚಾರಕ್ಕೆ ತೆರೆ ಎಳೆದಿದ್ದಾರೆ.