ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರ : ವಿಜಯಾನಂದ ಕಾಶಪ್ಪನವರ್ ರಿಂದ ಯತ್ನಾಳ್ ಗೆ ಎಚ್ಚರಿಕೆ!

ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಪಂಚಮಸಾಲಿ ಸಮುದಾಯದ ಮುಖಂಡ ವಿಜಯಾನಂದ ಎಚ್ಚರಿಕೆ ಕೊಟ್ಟಿದ್ದಾರೆ.

‘ಕಾಂಗ್ರೆಸ್ ವಿಚಾರ ಬಂದ್ರೆ ನಾನು ಹುಟ್ಟಾ ಕಾಂಗ್ರೆಸಿಗ. ಯತ್ನಾಳ್ ಮಾತನಾಡಿದ್ದು ತಪ್ಪು. ಯಾರೂ ನಾಯಕರ ಬಗ್ಗೆ ಮಾತನಾಡಬಾರದು. ನಾನು ಇದನ್ನು ಖಂಡಿಸ್ತೀನಿ. ವಾಜಪೇಯಿ ಬಗ್ಗೆ ಮಾತನಾಡಿದ್ರೆ ಅವರು ಸುಮ್ಮನಿರ್ತಾರಾ’ ಎಂದು ಯತ್ನಾಳ್ ವಿರುದ್ದ ಹರಿಹಾಯ್ದರು.

‘ಸಮಯದಾಯದ ಹೋರಾಟ ಬೇರೆ, ರಾಜಕೀಯ ವಿಚಾರ ಬೇರೆ. ರಾಜಕೀಯ ಬಂದಾಗ ನಾನು ಇದನ್ನು ಖಂಡಿಸಬೇಕಾಗುತ್ತದೆ. ಯತ್ನಾಳ್ ಜೊತೆಗೆ ಮಾತನಾಡ್ತೀನಿ, ಈ ತರಹ ಯತ್ನಾಳ್ ಮಾತನಾಡಬಾರದು’ ಎಂದರು.

ಇನ್ನೂ ನಿನ್ನೆ ಯತ್ನಾಳ್ ಹೇಳಿಕೆ ವಿರುದ್ಧ ಯುವ ಕಾಂಗ್ರೆಸ್ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದೆ. ಜೊತೆಗೆ ಬೆಂಗಳೂರು ನಗರದ ಶಾಸಕರ ಭವನದಲ್ಲಿರುವ ಯತ್ನಾಳ್ ಕೊಠಡಿಯ ಬಾಗಿಲಿಗೆ ಅವಾಚ್ಯ ಶಬ್ದಗಳಿಮದ ನಿಂದಿಸಿ ಬಿನ್ ಲಾಡೆನ್ ಮುಖ ಹೋಲುವ ಭಿತ್ತಿಪತ್ರ ಅಮಟಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights