ಬೆಂಗಳೂರಿನಲ್ಲಿ ಮುಂದುವರೆದ ಐಟಿ ರೇಡ್ : ಉಮೇಶ್ ಆಪ್ತನ ಮನೆಯಲ್ಲಿ ಶೋಧಕಾರ್ಯ!
ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ದೊಡ್ಡ ದೊಡ್ಡ ಕುಳಗಳಿಗೆ ಬಿಗ್ ಶಾಕ್ ನೀಡುತ್ತಿದ್ದಾರೆ. ನಿನ್ನೆಯಿಂದಲೂ ರಾಜ್ಯ ರಾಜಧಾನಿಯಲ್ಲಿ ಐಟಿ ದಾಳಿ ನಡೆಯುತ್ತಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆ ಹಾಗೂ ಕಚೇರಿ ಮೇಲೆ ಐಟಿ ರೇಡ್ ಮಾಡಿದೆ. ಮಾತ್ರವಲ್ಲದೆ ಉಮೇಶ್ ಆಪ್ತನ ಮನೆಯಲ್ಲಿ ರಾತ್ರಿಯಿಡಿ ಪರಿಶೀಲನೆ ಮಾಡಿದೆ.
ನಿನ್ನೆ ಬೆಳಂಬೆಳಿಗ್ಗೆ ಅಧಿಕಾರಿಗಳು ಗುತ್ತಿಗೆದಾರರು, ಚಾರ್ಟರ್ಡ್ ಅಕೌಂಟಂಡ್ಸ್, ವೆಂಡರ್ ಗಳು ಹಾಗೂ ಪ್ರಭಾವಿಗಳ ಆಪ್ತರ ಮನೆ ಮೇಲೆ ದಾಳಿ ನಡೆಸಿತ್ತು. ಈ ದಾಳಿ ರಾತ್ರಿಯಿಡೀ ಮಂದುವರಿದು, ಇಂದೂ ಕೂಡ ಕಂಟಿನ್ಯೂ ಆಗಿದೆ.
ಬೆಂಗಳೂರಿನ ರಾಜಾಜಿನಗರ, ಸಹಕಾರನಗರ, ಗಿರಿನಗರ ಸೇರಿ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ಜೊತೆಗೆ ಉಮೇಶ್ ನಿವಾಸದಲ್ಲಿ ಮೂವರು ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ರಾತ್ರಿ ವೇಳೆ ಉಮೇಶ್ ನಿವಾಸಕ್ಕೆ ಆಗಮಿಸಿದ್ದ ಅಧಿಕಾರಿಗಳ ಒಂದು ತಂಡ ದಾಖಲೆಗಳನ್ನು ವಶಕ್ಕೆ ಪಡೆದು ತೆರಳಿತ್ತು. ನಂತರ ಬಂದು ಇನ್ನೊಂದು ಟೀಂ ರಾತ್ರಿಯಿಡೀ ಮೊಕ್ಕಾಂ ಹೂಡಿತ್ತು.
ಇನ್ನೂ ವಸಂತನಗರದ ಎಂಬೆಸಿ ಅಪಾರ್ಟ್ಮೆಂಟ್ ನ 19ನೇ ಬ್ಲಾಕ್ ನಲ್ಲಿರುವ ಉಮೇಶ್ ಆಪ್ತ ಅರವಿಂದ್ ಮನೆ ಮೇಲೆ ಶೋಧಕಾರ್ಯ ನಡೆಸಿದ್ದಾರೆ. ಮನೆಯ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಈ ವೇಳೆ ಅರವಿಂದ್ 5 ದಿನಗಳ ಹಿಂದೆಷ್ಟೇ ದುಬೈಗೆ ತೆರಳಿದ್ದಾರೆ ಎನ್ನಲಾಗಿದೆ.