ಓದಲು ಆಸಕ್ತಿ ಇಲ್ಲದೆ ಮನೆ ತೊರೆದ ಮಕ್ಕಳು ಪತ್ತೆ : ನಿಟ್ಟುಸಿರು ಬಿಟ್ಟ ಪೋಷಕರು!
ಓದಲು ಆಸಕ್ತಿ ಇಲ್ಲವೆಂದು ಬೆಂಗಳೂರಿನಿಂದ ಮನೆ ತೊರೆದಿದ್ದ ಮಕ್ಕಳು ಪತ್ತೆಯಾಗಿದ್ದಾರೆ. ಇದರೊಂದಿಗೆ 2 ದಿನಗಳ ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.
ಮಕ್ಕಳು ಕಾಣದೆ ಕಂಗಾಲಾಗಿದ್ದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಕ್ರೀಡೆಯಲ್ಲಿ ಸಾಧನೆ ಮಾಡು ಗುರಿ ಇಟ್ಟುಕೊಂಡ ಮಕ್ಕಳು ಓದಲು ಆಸಕ್ತಿ ಇಲ್ಲದೆ ಮನೆ ತೊರದಿದ್ದರು.
ಹೀಗೆ ನಾಪತ್ತೆಯಾಗಿದ್ದ 7 ಮಕ್ಕಳ ಪೈಕಿ ಪರೀಕ್ಷಿತ್, ಕಿರಣ್, ಮೂವರು ಮಕ್ಕಳು ಪತ್ತೆಯಾಗಿದ್ದಾರೆ. ಇವರು ಮೈಸೂರು ದಸರಾ ನೋಡಿಕೊಂಡು ವಾಪಾಸ್ಸಾಗಿದ್ದಾರೆ ಎಂದು ತಿಳಿದು ಬಂದಿದೆ. ಮಕ್ಕಳನ್ನು ರಕ್ಷಿಸಿ ಉಪ್ಪಾರಪೇಟೆ ಠಾಣೆಗೆ ಕಳುಹಿಸಲಾಗಿದೆ. ಆದರೆ ಇನ್ನುಳಿದ ಮಕ್ಕಳ ಮಾತ್ರ ಇನ್ನೂ ಪತ್ತೆಯಾಗಿಲ್ಲ.
ವಿಷಯ ತಿಳಿದ ನಂದನ್ ಮತ್ತು ಪರೀಕ್ಷಿತ್ ಪೋಷಕರು ಉಪ್ಪಾರಪೇಟೆ ಠಾಣೆಗೆ ಓಡೋಡಿ ಬಂದಿದ್ದಾರೆ. ಪರೀಕ್ಷಿತ್ ತಂದೆ ವೇದಮೂರ್ತಿ ಮತ್ತು ನಂದನ್ ತಂದೆ ಮಂಜುನಾಥ್ ಠಾಣೆಯಲ್ಲಿ ಮಕ್ಕಳನ್ನು ಕಂಡು ಆನಂದಭಾಷ್ಪ ಸುರಿಸಿದ್ದಾರೆ.