ಹರಕೆ ತೀರಿಸಲು ಬೆಟ್ಟ ಏರಿದ ಭಕ್ತ; ದರ್ಶನ ಪಡೆದು ಹೊರಬರುತ್ತಲೇ ಹೃದಯಾಘಾತದಿಂದ ಸಾವು
ಭಕ್ತನೊಬ್ಬ ದೇವರ ಹರಕೆ ತೀರಿಸುವುಕ್ಕಾಗಿ ಬೆಟ್ಟ ಏರಿ, ದೇವರ ದರ್ಶನ ಪಡೆದು ಹೊರಬರುತ್ತಿದ್ದಂತೆಯೇ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗೆಮ್ಮ ದೇವಾಲಯದಲ್ಲಿ ನಡೆದಿದೆ.
ಉಚ್ಚಂಗೆಮ್ಮ ದೇವರಿಗೆ ಹರಕೆ ಹೊತ್ತಿದ್ದ 60 ವರ್ಷದ ಹುಚ್ಚಪ್ಪ ಎಂಬುವವರು, ಹರಕೆ ತೀರಿಸುವುದಕ್ಕಾಗಿ 600 ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದಿದ್ದಾರೆ. ದರ್ಶನ ಪಡೆದು ಹೊರಬರುತ್ತಿದ್ದಂತೆಯೇ ಅವರು ಹೃದಯಾಘಾತದಿಂದ ಸಾವಪ್ಪಿದ್ದಾರೆ.
ಮೃತ ಹುಚ್ಚಪ್ಪ ದಾವಣಗೆರೆ ಮೂಲದವರು ಎಂದು ಹೇಳಲಾಗಿದೆ. ಅವರು ತಮ್ಮ ಪತ್ನಿಯೊಂದಿಗೆ ಉಚ್ಚಂಗೆಮ್ಮ ದರ್ಶನಕ್ಕೆ ತೆರಳಿದ್ದರು. ದೇವರ ದರ್ಶನ ಪಡೆದು ಹೊರ ಬರುತ್ತಿದ್ದಂತೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಡೋಲಿಯಲ್ಲಿ ಕೆಳಗೆ ಕರೆತಂದು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಗಿತ್ತು. ಆದರೆ, ಅವರು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Read Also: ಪಂಜಾಬ್: ಮಾಜಿ ಸಿಎಂ ಹೊಸ ಪಕ್ಷ ಸ್ಥಾಪನೆ; ಬಿಜೆಪಿ ಜೊತೆ ಮೈತ್ರಿಗೆ ಸಿದ್ಧ!