ಫ್ಯಾಕ್ಟ್‌ಚೆಕ್: ಹಿಂದೂಗಳನ್ನು ಹೊರಹಾಕಬೇಕೆಂದು ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಹೇಳಿಲ್ಲ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಪ್ರಯಾಣದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸಹ ಹಂಚಿಕೊಳ್ಳಲಾಗಿದೆ. ಈ ನಡುವೆ ರಾಹುಲ್ ಭಾಷಣದ 9 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

“ಹಿಂದೂಗಳು ಮತ್ತು ಹಿಂದುತ್ವವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ನಾವು ಮತ್ತೊಮ್ಮೆ  “ಹಿಂದೂ” ಮತ್ತು “ಹಿಂದುತ್ವವಾದಿಗಳನ್ನು ಹೊರಹಾಕಬೇಕಾಗಿದೆ ” ಹಿಂದೂಗಳ ಮೇಲೆ ಇಷ್ಟೊಂದು ದ್ವೇಷ ಸರಿಯಲ್ಲ ರಾಹುಲ್ ಜೀ. ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಟ್ವಿಟರ್ ಪೋಸ್ಟ್

ಈ ವೀಡಿಯೋವನ್ನು ಶೇರ್ ಮಾಡುತ್ತಾ, ಬಳಕೆದಾರ ಜೀತೇಂದ್ರ ಕುಮಾರ್ ಬರೆದಿದ್ದಾರೆ – “ನಾವು ಮತ್ತೊಮ್ಮೆ ಈ “ಹಿಂದೂ” ಮತ್ತು “ಹಿಂದುತ್ವವಾದಿಗಳನ್ನು” ಹೊರಹಾಕಬೇಕು – ರಾಹುಲ್ ಗಾಂಧಿ! ನಿಮ್ಮ ಏಳು ಜನ್ಮಗಳಲ್ಲಿಯೂ ನೀವು ಪಿಎಂ ಆಗಲು ಸಾಧ್ಯವಿಲ್ಲ, ಆದರೆ ಹಿಂದೂಗಳ ಈ ದ್ವೇಷವು ಖಂಡಿತವಾಗಿಯೂ ನಿಮ್ಮನ್ನು ಇಟಲಿಗೆ ಕಳಿಸುತ್ತದೆ ಪಪ್ಪು! ಎಂದು ಹಂಚಿಕೊಂಡಿದ್ದಾರೆ.”

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್ ಮೂಲಕ ಸರ್ಚ್  ಮಾಡಿದಾಗ, ಈ ದೃಶ್ಯಗಳು  ಡಿಸೆಂಬರ್ 2021 ರಂದು ಜೈಪುರದಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ಗಾಂಧಿಯವರು ಮಾಡಿದ ಭಾಷಣದ ವಿಡಿಯೋ ಲಭ್ಯವಾಗಿದೆ.

ರಾಹುಲ್ ಗಾಂಧಿ ತಮ್ಮ ಭಾಷಣದ ವೇಳೆ “2014 ರಿಂದ ಇಲ್ಲಿರುವುದು ಹಿಂದುತ್ವವಾದಿಗಳ ಆಡಳಿತವೆ ಹೊರತು ಹಿಂದೂಗಳದಲ್ಲ. ನಾವು ಮತ್ತೊಮ್ಮೆ ಈ ಹಿಂದುತ್ವವಾದಿಗಳನ್ನು ಹೊರಹಾಕಬೇಕು ಮತ್ತು ಹಿಂದೂಗಳ ಆಡಳಿತವನ್ನು ಮರಳಿ ತರಬೇಕು” ಎಂದು ಹೇಳಿರುವ ದೃಶ್ಯಗಳನ್ನು ಇಡೀ ಭಾಷಣವನ್ನು ಸಬ್ ಟೈಟಲ್‌ನೊಂದಿಗೆ ಕಾಣಬಹುದು. ರಾಹುಲ್ ಗಾಂಧಿಯವರ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ಕ್ಲಿಪ್ ಅನ್ನು 12:08 ನಿಮಿಷಗಳ ವೀಡಿಯೊದಲ್ಲಿ  ರಾಹುಲ್ ಗಾಂಧಿ ಹೇಳುವುದನ್ನು ನೋಡಬಹುದು.

ಅಲ್ಲದೆ, ರಾಹುಲ್ ಗಾಂಧಿ ಅವರು 12 ಡಿಸೆಂಬರ್ 2021 ರಂದು ಮಾಡಿದ ಭಾಷಣವನ್ನು, ‘ANI’ ಟ್ವೀಟ್ ಮಾಡಿದೆ – “ಹಿಂದುತ್ವವಾದಿಗಳು ಅಧಿಕಾರವನ್ನು ಮಾತ್ರ ಬಯಸುತ್ತಾರೆ ಮತ್ತು ಅವರು 2014 ರಿಂದ ಅಧಿಕಾರದಲ್ಲಿದ್ದಾರೆ. ನಾವು ಈ ಹಿಂದುತ್ವವಾದಿಗಳನ್ನು ಅಧಿಕಾರದಿಂದ ಹೊರಹಾಕಬೇಕು ಮತ್ತು ಹಿಂದೂಗಳನ್ನು ಮರಳಿ ಕರೆತರಬೇಕು: ಜೈಪುರದಲ್ಲಿ ಪಕ್ಷದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ ಎಂದು ಬರೆಯಲಾಗಿದೆ”.  ರಾಹುಲ್ ಗಾಂಧಿಯವರ ಕಾಮೆಂಟ್‌ಗಳ ಕುರಿತು ಕೆಲವು ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಒಟ್ಟು 30:33 ನಿಮಿಷಗಳ ಅವಧಿಯ ವೀಡಿಯೊ, ರಾಹುಲ್ ಗಾಂಧಿಯವರ ವೈರಲ್ ವೀಡಿಯೊವನ್ನು 12:00 ರಿಂದ 12:40 ನಿಮಿಷಗಳವರೆಗೆ ಕೇಳಬಹುದು. ತಮ್ಮ ಭಾಷಣದ ವೇಳೆ ರಾಹುಲ್ ಗಾಂಧಿ ಹಿಂದೂ ಮತ್ತು ಹಿಂದುತ್ವವಾದಿಗಳ ನಡುವಿನ ವ್ಯತ್ಯಾಸವನ್ನು ಸಾರ್ವಜನಿಕರಿಗೆ ತಿಳಿಸಿದರು. ಮಹಾತ್ಮ ಗಾಂಧಿ ಅವರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿದ ನಿಜವಾದ ಹಿಂದೂ ಎಂದು ಬಣ್ಣಿಸಿದರು, ಆದರೆ ಮಹಾತ್ಮ ಗಾಂಧಿಯವರ ನರಹಂತಕ ನಾಥೂರಾಂ ಗೋಡ್ಸೆ ಹಿಂದುತ್ವವಾದಿಯಾಗಿದ್ದರು ಎಂದರು.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿಯವರು 12 ಡಿಸೆಂಬರ್ 2021 ರಂದು ರಾಜಸ್ಥಾನದ ಜೈಪುರದಲ್ಲಿ ಕಾಂಗ್ರೆಸ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದು “ಹಿಂದುತ್ವವಾದಿಗಳನ್ನು ಹೊರಹಾಕಬೇಕು ಮತ್ತು ಹಿಂದೂಗಳ ಆಳ್ವಿಕೆಯನ್ನು ಮರಳಿ ತರಬೇಕು”.ಎಂಬ ಹೇಳಿಕೆಯನ್ನು “ಹಿಂದೂಗಳು ಮತ್ತು ಹಿಂದುತ್ವವಾದಿಗಳನ್ನು ಹೊರಹಾಕಬೇಕು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಎಡಿಟ್ ಮಾಡಿದ ವಿಡಿಯೊವನ್ನು ವೈರಲ್ ಮಾಡಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ನಾನು ಪಾಕಿಸ್ತಾನಿ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಶಾರುಖ್ ಖಾನ್ ಹೇಳಿದ್ದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights