ನಿನ್ನೆ ವಿಘ್ನ ನಿವಾರಕ ಗಣೇಶನ ಪೂಜೆ : ಇಂದು ಇಲಿಗೆ ನಾನ್ ವೆಜ್ ನೈವ್ಯದ್ಯ
ವಿಘ್ನ ನಿವಾರಕ ಗಣೇಶನ ಹಬ್ಬವನ್ನು ನಿನ್ನೆ ವಿಜೃಂಭನೆಯಿಂದ ಆಚರಣೆ ಮಾಡಲಾಗಿದೆ. ಇಂದು ಗಣೇಶನ ವಾಹನ ಇಲಿಗೆ ನಾನ್ ವೆಜ್ ನೈವ್ಯದ್ಯ ಮಾಡಲಾಗಿದೆ.
ಬೆಳಗಾವಿಯ ವಡಗಾವಿಯ ನೇಕಾರರ ಮನೆಯಲ್ಲಿ ಪ್ರತಿ ವರ್ಷ ಇಲಿಗೆ ಸ್ಪೇಷಲ್ ನೈವ್ಯದ್ಯ ಮಾಡುವುದು ಸಂಪ್ರದಾಯವಾಗಿದೆ. ನಿನ್ನೆ ಗಣೇಶನ ವಿಗ್ರಹದ ಪಕ್ಕದಲ್ಲಿಯೇ ಇದ್ದ ಇಲಿಯನ್ನು ಇಂದು ಬೇರ್ಪಡಿಸಿ ನಾನ್ ವೆಜ್ ನೈವ್ಯದ್ಯ ಇಡಲಾಗಿದೆ. ನೈವ್ಯದ್ಯಕ್ಕಾಗಿ ಮಟನ್, ಚಿಕನ್ ಹಾಗೂ ಮೊಟ್ಟೆ ಸಾಂಬಾರ್ ಸಿದ್ದ ಪಡಿಸಲಾಗಿದೆ.
ನೇಕಾರರು ಮನೆಯಲ್ಲಿ ಪ್ರತಿವರ್ಷ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ನೇಕಾರರು ಸೀರೆ ಸೇರಿ ಅನೇಕ ವಸ್ತುಗಳನ್ನು ತಂದು ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸುವ ಯಾವುದೇ ವಸ್ತುಗಳನ್ನು ಇಲಿ ಕಚ್ಚಿ ಹಾಳು ಮಾಡದೇ ಇರಲಿ ಎಂದು ಪ್ರತಿ ವರ್ಷ ಈ ರೀತಿಯಲ್ಲಿ ಇಲಿಗೆ ಸ್ಪೇಷನ್ ಊಟದ ಮೂಲಕ ಶಾಂತಿ ಮಾಡಲಾಗುತ್ತದೆ. ಈ ಸಂಪ್ರದಾಯ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದ್ದು ನಾವು ಮುಂದುವರಿಸಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.