ನಾರದ ಪ್ರಕರಣ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಧನ ಏಕಿಲ್ಲ: ಪತ್ರಕರ್ತ ಪ್ರಶ್ನೆ

ನಾರದ ಪ್ರಕರಣವೆಂದು ಹೆಸರು ಪಡೆದಿರುವ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ, ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ, ವಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರನ್ನು ಏಕೆ ಬಂಧಿಸಿಲ್ಲ ಎಂದು ಪತ್ರಕರ್ತ ಮ್ಯಾಥ್ಯು ಸ್ಯಾಮುಯಲ್‌ ಪ್ರಶ್ನಿಸಿದ್ದಾರೆ.

2014ರಲ್ಲಿ ಬಂಗಾಳದ ನಾರದ ಟಿವಿ ವಾಹಿನಿಯ ಪತ್ರಕರ್ತರಾದ ಮ್ಯಾಥ್ಯು ಸಾಮ್ಯುಯಲ್‌ ಅವರು ಮಾರುವೇಶದಲ್ಲಿ ಲಂಚ ಪ್ರಕರಣದ ಕಾರ್ಯಚರಣೆ ನಡೆಸಿದ್ದರು. ಈ ವೇಳೆ ಟಿಎಂಸಿ ನಾಯಕರನ್ನು ಹೋಲುವ ನಾಲ್ವರು ಲಂಚ ಪಡೆಯುತ್ತಿರುವ ವಿಡಿಯೋವನ್ನು ಅವರು ಸೆರೆ ಹಿಡಿದಿದ್ದರು. ಈ ವಿಡಿಯೋ 2016ರ ಚುನಾವಣೆಯ ಸಂದರ್ಭದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು.

ವಿಡಿಯೋದಲ್ಲಿ ಇರವವರನ್ನು ಟಿಎಂಸಿ ಸಚಿವರಾದ ಫಿರ್ಹಾದ್‌ ಹಕೀಮ್‌, ಸುಬ್ರತ ಮುಖರ್ಜಿ, ಶಾಸಕ ಮದನ್‌ ಮಿತ್ರ ಮತ್ತು ಸೋವನ್‌ ಮುಖರ್ಜಿ ಎಂದು ಪರಿಗಣಿಸಿ ಮೂರು ವ‍ರ್ಷಗಳ ಹಿಂದೆ ಸಿಬಿಐ ಆರೋಪ ಪಟ್ಟಿ ದಾಖಲಿಸಿದ್ದರು. ಆದರೆ, ಇದೂ ವರೆಗೂ ಯಾರನ್ನೂ ಬಂಧಿಸಿರಲಿಲ್ಲ. ಇದೀಗ ನಾಲ್ವರು ಟಿಎಂಸಿ ಮುಖಂಡರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪತ್ರಕರ್ತ ಮ್ಯಾಥ್ಯು ಸ್ಯಾಮುಯಲ್‌, ಟಿಎಂಸಿ ಮುಖಂಡರನ್ನು ಬಂಧಿಸಿರುವುದು ಸ್ವಾಗತಾರ್ಹ. ಆದರೆ, ಈ ಪ್ರಕರಣದಲ್ಲಿ ಸುವೆಂದು ಅಧಿಕಾರಿ ಅವರು ಆರೋಪಿಯಾಗಿದ್ದು, ಅವರನ್ನು ಬಂಧಿಸದೇ ಇರುವುದು ಬೇಸರ ತಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಾಜಾ ಸಂಘರ್ಷ ಉಲ್ಬಣ : ವಾಯುದಾಳಿಗಳು ಮುಂದುವರಿಯಲಿವೆ ಎಂದ ಇಸ್ರೇಲಿ ಪ್ರಧಾನಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights