ಸೀಟ್ ಕಾಲಿದ್ರು ನಾನ್ ಕುಂಡ್ರಲ್ : ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಕುಡುಕ ಅಂದರ್..
ಸೀಟ್ ಕಾಲಿದ್ರು ನಾನ್ ಕುಂಡ್ರಲ್ ನೋಡ್ ಏನ್ ಮಾಡವಾ… ಅಫ್ಟ್ರಾಲ್ ಕಂಡ್ಯಾಕರ್ ನೀನು ಅಂದವನು ಅಂದರ್..
ಕುಡಿದ ಮತ್ತಿನಲ್ಲಿ ಬಸ್ ನೊಳಗೆ ಪ್ರಯಾಣಿಕನ ಪುಂಡಾಟಿಕೆಗೆ ಕಂಡಕ್ಟರ್ ತೀವ್ರವಾಗಿ ಗಾಯಗೊಂಡಿದ್ದಾನೆ. ಬಸ್ ಕಂಡಕ್ಟರ್ ಕಾಶೀನಾಥ್ ಭಜಂತ್ರಿ ಎಂಬುವವರ ಮೇಲೆ ಕುಡುಕನೊಬ್ಬ ಹಲ್ಲೆ ಮಾಡಿದ ಘಟನೆ ಬಾಗಲಕೋಟೆಯ ಸಿಕ್ಕೇರಿ ಗ್ರಾಮದ ಬಳಿ ನಡೆದಿದೆ.
ಕುಡಿದ ಮತ್ತಿನಲ್ಲಿ ಪ್ರಯಾಣಿಕ ಸಂತೋಷ ವಾಲಿಕಾರ ಎಂಬಾತನಿಂದ ಹಲ್ಲೆ ಮಾಡಲಾಗಿದೆ.ಜೊತೆಗೆ ಬಸ್ ನಲ್ಲಿ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ ಮಾಡಿದ್ದಾನೆ. ಸಂತೋಷ್ ವಾಲೀಕಾರ ಬಾಗಲಕೋಟೆ ತಾಲೂಕಿನ ರಾಂಪೂರ ಗ್ರಾಮದವ. ಮುದ್ದೇಬಿಹಾಳದಿಂದ ಬಾಗಲಕೋಟೆಗೆ (ಬಸ್ ಸಂಖ್ಯೆ-ಕೆಎ ೨೯-ಎಫ್ ೧೧೭೫) ಬರುವ ಬಸ್ ಗೆ ರಾಂಪೂರ ಗ್ರಾಮದಲ್ಲಿ ಹತ್ತಿದ್ದ (ಏರಿದ್ದ) ಕುಡುಕ ಪ್ರಯಾಣಿಕ, ಸೀಟ್ ನಲ್ಲಿ ಮಲಗಿ ಕೊನೆಗೆ ಬಾಗಿಲ ಬಳಿ ಬಂದು ನಿಂತಿದ್ದಾನೆ.
ಈ ವೇಳೆ ಸೀಟ್ ಮೇಲೆ ಕೂರುವಂತೆ ಹೇಳಿದ ಕಂಡಕ್ಟರ್ ಕಾಶೀನಾಥ್ ನೊಂದಿಗೆ ಜಗಳವಾಡಿಕೊಂಡು ಕಂಡಕ್ಟರ್ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಮುಖದ ಮೇಲೆ ರಕ್ತ ಬರುವ ರೀತಿ ಹೊಡೆದಿದ್ದಾನೆ. ಬಸ್ ಕಂಡಕ್ಟರ್ ಬಾಗಲಕೋಟೆ ಗ್ರಾಮೀಣ ಪೋಲಿಸ ಠಾಣೆಗೆ ದೂರು ನೀಡಿದ್ದಾರೆ.ಆರೋಪಿ ಸಂತೋಷನನ್ನ ವಶಕ್ಕೆ ಪಡೆದ ಪೋಲಿಸರ ಮುಂದೆ ಕುಡುಕ ಪ್ರಯಾಣಿಕನ ಆಟಾಟೋಪ ಮೆರೆದಿದ್ದಾನೆ. ಬಾಗಲಕೋಟೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.