ಒಂದು ತಿಂಗಳು ಮುಚ್ಚಿದ್ದ ಆಭರಣ ಅಂಗಡಿ ತೆರೆದಾಗ ಮಾಲೀಕ ಶಾಕ್..!

ಕೊರೊನಾ ಲಾಕ್ ಡೌನ್ ನಿಂದಾಗಿ ಮುಚ್ಚಿದ್ದ ಅಂಗಡಿಗಳು ಸದ್ಯ ತೆರೆಯಲಾರಂಭಿಸಿವೆ. ಹೀಗೆ ಕಣ್ಣೂರಿನಲ್ಲಿ ಆಭರಣದಂಗಡಿಯೊಂದನ್ನ ತೆರೆದ ವೇಳೆ ಮಾಲೀಕ್ ಶಾಕ್ ಆದ ಘಟನೆ ನಡೆದಿದೆ.

ಹೌದು… ಲಾಕ್‌ಡೌನ್‌ ಹೇರಿದ್ದ ಕಾರಣ ಒಂದು ತಿಂಗಳ ಕಾಲ ಮುಚ್ಚಲಾಗಿದ್ದ ಆಭರಣ ಅಂಗಡಿಯನ್ನು ತೆರೆದ ಮಾಲೀಕ ಪಯ್ಯನೂರ್‌ನ ಸಜಿತ್‌ ಅವರಿಗೆ ಎದುರಾದ ಮೊದಲ ಗ್ರಾಹಕರನ್ನು ನೋಡಿ ಬೆಚ್ಚಿದ್ದಾರೆ. ಆಭರಣದ ಅಂಗಡಿಯಲ್ಲಿ ಹಳೆಯ ವಸ್ತುಗಳನ್ನು ಇರಿಸಿದ್ದ ಜಾಗದಲ್ಲಿ 3 ಮೀಟರ್‌ ಉದ್ದದ ಹೆಬ್ಟಾವು ತನ್ನ 20 ಮೊಟ್ಟೆಗಳ ಜೊತೆ ಆಶ್ರಯ ಪಡೆದುಕೊಂಡಿತ್ತು.

ಈ ಬಗ್ಗೆ ಮಾತನಾಡಿದ ಮಾಲೀಕ ಸಜಿತ್, ‘ಬಾಗಿಲು ತೆರೆದು ಹೆಬ್ಟಾವನ್ನು ನೋಡಿದಾಗ ಒಮ್ಮೆಲೆ ಕಿರುಚಿಕೊಂಡೆ, ಬಳಿಕ ಸುಧಾರಿಸಿಕೊಂಡು ಹಾವು ಹಿಡಿಯುವವರಿಗೆ ಕರೆ ಮಾಡಿದೆ. ಅವರು ಬಂದು ಹಾವು ಹಿಡಿದರು. ಹಾವು ಮತ್ತು ಮೊಟ್ಟೆಗಳನ್ನು ಅವರು ಒಯ್ದಿದ್ದಾರೆ. ಮೊಟ್ಟೆಯಿಂದ ಮರಿ ಹೊರಬರುವವರೆಗೂ ಅವರು ಅವನ್ನು ರಕ್ಷಿಸುತ್ತಾರೆ’ ಎಂದು ಅಂಗಡಿ ಮಾಲಿಕ ಸಜಿತ್‌ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights