ನಾನು ಭವಿಷ್ಯ ನುಡಿಯುವುದಿಲ್ಲ, ರಾಜ್ಯಕ್ಕೆ ಒಳ್ಳೆಯದಾಗಲಿ – ಮಾಜಿ ಸಚಿವ ಡಿ ಕೆ ಶಿವಕುಮಾರ್

ನಾನು ಜ್ಯೋತಿಷಿಯಲ್ಲ. ನಾನೊಬ್ಬ ಆಶಾವಾದಿ. ನಾನು ಭವಿಷ್ಯ ನುಡಿಯುವುದಿಲ್ಲ, ರಾಜ್ಯಕ್ಕೆ ಒಳ್ಳೆಯದಾಗಲಿ ಅಂತ ಬಯಸುತ್ತೇನೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರದ ಮಾದರಿ ರಾಜಕೀಯ ಬೆಳವಣಿಗೆ ರಾಜ್ಯದಲ್ಲೂ ಮರುಕಳಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಸರ್ಕಾರದ ಅವಧಿ, ಚುನಾವಣೆ ಬಗ್ಗೆ ಹಲವು ನಾಯಕರು ಮಾತನಾಡೋದನ್ನು ನೋಡಿದ್ದೇನೆ. ಆದರೆ ನಾನು ನಾನು ಭವಿಷ್ಯ ನುಡಿಯುವುದಿಲ್ಲ, ರಾಜ್ಯಕ್ಕೆ ಒಳ್ಳೆಯದಾಗಲಿ ಅಂತ ಬಯಸುತ್ತೇನೆ ಎಂದರು.

ಸ್ಚಾರ್ಥ ಬಿಟ್ಟು ರಾಜ್ಯದ ಅಭಿವೃದ್ದಿಯ ಬಗ್ಗೆ ಚಿಂತನೆಯಾಗಬೇಕು. ರಾಜ್ಯಕ್ಕೆ ಗೌರವ ಸಿಗಬೇಕು, ಸಂವಿಧಾನಕ್ಕೆ ಗೌರವ ಸಿಗಬೇಕು. ರಾಜಕಾರಣಿಗಳಿಗೂ ಗೌರವ ಸಿಗಬೇಕು. ಇತ್ತೀಚೆಗೆ ರಾಜಕಾರಣಿಗಳಿಗೆ ಗೌರವ ಸಿಗುತ್ತಿಲ್ಲ. ಮುಂದಾದರೂ ರಾಜಕಾರಣಿಗಳಿಗೆ ಗೌರವ ಸಿಗುವಂತಾಗಲಿ ಅಂತ ಬಯಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights