ಮಂಡ್ಯ ಮನ್ಮುಲ್ ನಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲಿದೆ- ಎಚ್.ಟಿ. ಮಂಜು
ಮಂಡ್ಯ ಮನ್ಮುಲ್ ನಲ್ಲಿ ಜೆಡಿಎಸ್ ಬಾಡಿ ಅಧಿಕಾರ ಹಿಡಿಯಲಿದೆ ಎಂದು ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ನಿರ್ದೇಶಕ ಎಚ್.ಟಿ. ಮಂಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಜೆಡಿಎಸ್ ನಿರ್ದೇಶಕರ ಮೇಲೆ ಭರವಸೆ ಇಟ್ಟು ಬಹಳ ಬಿಜೆಪಿ ಪಾಳಯದ ನಿರ್ದೇಶಕರೊಬ್ಬರು ನಮ್ಮ ಪರವಾಗಿ ಮತ ಹಾಕಿದ್ದಾರೆ. ಈ ಮೂಲಕ ಎಚ್.ಟಿ. ಮಂಜು ಅಧ್ಯಕ್ಷರ ಮತದಾನದಲ್ಲಿ ಕ್ರಾಸ್ ವೋಟಿಂಗ್ ಆಗಿರೋ ರಹಸ್ಯ ಬಿಚ್ವಿಟ್ಟಿದ್ದಾರೆ.
ನಮ್ಮನ್ನು ಅನರ್ಹ ಮಾಡಲು ಕೆಲವರು ರಾಜಕೀಯ ಪಿತೂರಿ ಮಾಡಿದ್ರು. ನಾವು ಹೈಕೋರ್ಟ್ ಮೆಟ್ಟಿಲೇರಿದ್ವು, ಹೈಕೋರ್ಟ್ ಅವ್ರಿಗೆ ಛೀಮಾರಿ ಹಾಕಿದೆ. ನಾವೇ ಮನ್ಮುಲ್ ಅಧಿಕಾರ ಹಿಡಿಯೋದು ಈ ಬಗ್ಗೆ ನಮಗೆ ಭರವಸೆ ಇದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಜೆಡಿಎಸ್ ನಿರ್ದೇಶಕನ ಹೇಳಿಕೆಯಿಂದ ಮನ್ಮುಲ್ ಫಲಿತಾಂಶ ಕುತೂಹಲ ಮೂಡಿಸಿದೆ.