ಮಂಡ್ಯ ಮಸಣಮ್ಮ ದೇವಿಯ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ : ನಾಳೆನೂ ನಿಷೇಧಾಜ್ಞೆ

ಮಂಡ್ಯ ತಾಲೂಕಿನ ಸಾತನೂರಿನ ಮಸಣಮ್ಮ ದೇವಿಯ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಸಾತನೂರು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಆದೇಶ ಹೊರಡಿಸಲಾಗಿದೆ.

ಮಂಡ್ಯ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ರಿಂದ ನಿಷೇಧಾಜ್ಞೆ ಆದೇಶ ಹೊರಡಿಸಲಾಗಿದೆ. ತಲಾತಲಾಂತರಗಳಿಂದ ಜಾತ್ರೆ ಉತ್ಸವದ ಸಮಯದಲ್ಲಿ ನೂರಾರು ಪ್ರಾಣಿಗಳನ್ನು ದೇವಿ ಬಲಿ ಕೊಡ್ತಿದ್ದ ಗ್ರಾಮಸ್ಥರಿಗೆ ಆದೇಶದಿಂದ ಪ್ರಾಣಿ ಬಲಿ ನಿಲ್ಲಿಸುವುದು ಅನಿವಾರ್ಯವಾಗಿದೆ.

ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯಿಂದ ಈ ಬಾರಿಯ ಉತ್ಸವದಲ್ಲಿ ಪ್ರಾಣಿ ಬಲಿ ತಡೆಯುವಂತೆ ಜಿಲ್ಲಾಡಳಿಯಕ್ಕೆ‌  ದೂರು ಬಂದ ಹಿನ್ನಲೆಯಲ್ಲಿ ಪ್ರಾಣಿಬಲಿ ನಿಷೇಧ ಕಾಯ್ದೆ 1959 ಮತ್ತು ಕರ್ನಾಟಕ ಬಲಿ ನಿಷೇಧ ಕಾಯ್ದೆಯಡಿ ನಿಷೇಧಾಜ್ಞೆ ಆದೇಶ ಹೊರಡಿಸಲಾಗಿದೆ.

ನಿಷೇಧಾಜ್ಞೆಯಿಂದಾಗಿ ದೇವಾಲಯದ ಸುತ್ರಮುತ್ತ ಪ್ರಾಣಿ ನೀಡುವಂತಿಲ್ಲ. ಮಾರಕಾಸ್ತ್ರ ಹಿಡಿದು ತಿರುಗಾಡದಂತೆ ಆದೇಶ ಹೊರಡಿಸಲಾಗಿದೆ. ನ್ಯಾಯಾಲಯದ ನಿರ್ದೇಶನದಿಂದ ಕಂಗಾಲಾಗಿರೋ ಗ್ರಾಮಸ್ಥರಿಗೆ ಊರ ಹಬ್ಬದ ಮೇಲೆ ನ್ಯಾಯಾಲಯದ ಆದೇಶದ ಕರಿ ನೆರಳು ಬಿದ್ದಂತಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights