fact Check: ಮಹಿಳೆಯನ್ನು ಸನ್ಮಾನಿಸುತ್ತಿರುವ ವಿಡಿಯೋ ಕೊಡಗು ಜಿಲ್ಲಾಧಿಕಾರಿಯದ್ದಲ್ಲ!

ಮಹಿಳೆಯೊಬ್ಬರಿಗೆ ಹಲವು ಜನರ ಗುಂಪು ಹೂಕೊಟ್ಟು ಸ್ವಾಗತಿಸುವ ವಿಡಿಯೋವನ್ನು ಕೊಡಗು ಜಿಲ್ಲಾಧಿಕಾರಿಗೆ ಸನ್ಮಾನ ಮಾಡಲಾದ ವಿಡಿಯೋ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಸು ಅಲ್ಲಿಯ ಜಿಲ್ಲಾಧಿಕಾರಿ ತೆಗೆದುಕೊಂಡ ನಿರ್ಧಾರಗಳು ಹಾಗೂ ಜಾರಿಗೊಳಿಸಿದ ಕ್ರಮಗಳಿಗಾಗಿ ಕೊಡಗು ಜನರು ಅವರನ್ನು ಸನ್ಮಾನಿದ್ದಾರೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

 

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಕೊರೊನಾ ಸೋಂಕು ಹರಡುವಿಕೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ ಕೊಡಗು ಜಿಲ್ಲಾಧಿಕಾರಿಗೆ ಸನ್ಮಾನದ ವೀಡಿಯೊ.

ಸತ್ಯ: ಈ ವೀಡಿಯೊ ‘ಸೇಫ್ ಶಾಪ್ ಇಂಡಿಯಾ’ ಇ-ಕಾಮರ್ಸ್ ಕಂಪನಿಯ ಅಸೋಷಿಯೇಟ್‌ ನಜಿಯಾ ಬೇಗಂ ಅವರನ್ನು ಆ ಕಂಪನಿಯ ಸಿಬ್ಬಂದಿಗಳು ಸ್ವಾಗತಿಸಿದ್ದಾಗಿದೆ. ವಿಡಿಯೋದಲ್ಲಿರುವ ಮಹಿಳೆ ಕರ್ನಾಟಕದ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಯಲ್ಲ.  ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ‘20 ಫೆಬ್ರವರಿ 2020’ ರಂದು ಯೂಟ್ಯೂಬ್ ಬಳಕೆದಾರರು ಪೋಸ್ಟ್ ಮಾಡಿದ ವೀಡಿಯೊದಲ್ಲಿ ಪುರುಷರು ಮತ್ತು ಮಹಿಳೆಯರ ಗುಂಪು ಮಹಿಳೆಯನ್ನು ಸ್ವಾಗತಿಸುವ ದೃಶ್ಯಗಳು ಕಂಡುಬಂದಿವೆ. ಈ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ‘ಶ್ರೀಮತಿ ನಾಜಿಯಾ ಮ್ಯಾಮ್‌ ಡೈಮಂಡ್ ಲೇಡಿ ಸೇಫ್ ಶಾಪ್ ಇಂಡಿಯಾ’ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ. ಮಹಿಳೆಯನ್ನು ‘ಸೇಫ್ ಶಾಪ್ ಇಂಡಿಯಾ’ದ ನಾಜಿಯಾ ಬೇಗಂ ಎಂದು ವಿವರಿಸುವ ಮತ್ತೊಂದು ವಿಡಿಯೋದಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಈ ಕೀವರ್ಡ್‌ಗಳನ್ನು ಬಳಸಿಕೊಂಡು ಅಧಿಕೃತ ಮೂಲಗಳಿಗಾಗಿ ಹುಡುಕಿದಾಗ,  ಅಸೋಷಿಯೇಟ್‌ ನಜಿಯಾ ಬೇಗಂ ಅವರ ಯಶಸ್ಸಿನ ಕಥೆಯ ಕುರಿತ ವೀಡಿಯೊ ‘ಸೇಫ್ ಶಾಪ್ ಇಂಡಿಯಾ’ದ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾಗಿದೆ. ‘ಸೇಫ್ ಶಾಪ್ ಇಂಡಿಯಾ’ ಕಂಪನಿಯಲ್ಲಿ ಅಸೋಷಿಯೇಟ್‌ ಆಗಿರುವ ಮಹಿಳೆಯ ಯಶಸ್ಸಿನ ಕಥೆಯನ್ನು ವಿವರಿಸುವ ವೀಡಿಯೊದಲ್ಲಿ ಜಿಲ್ಲಾಧಿಕಾರಿ ಎಂದು ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿರುವ ಅದೇ ಮಹಿಳೆಯನ್ನು ಕಾಣಬಹುದು.

ಸೇಫ್ ಶಾಪ್ ಇಂಡಿಯಾ’ ಇ-ಕಾಮರ್ಸ್ ಕಂಪನಿಯಾಗಿದ್ದು ಅದು ಫ್ಯಾಷನ್, ಆರೋಗ್ಯ ಮತ್ತು ಜೀವನಶೈಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ‘ಸೇಫ್ ಶಾಪ್ ಇಂಡಿಯಾ’ ಸಿಬ್ಬಂದಿಗಳು ಕಂಪನಿಯ ಅಸೋಷಿಯೇಟ್‌ ನಜಿಯಾ ಬೇಗಂ ಅವರಗೆ ನಮಸ್ಕರಿಸಿ ಹೂವುಗಳನ್ನು ನೀಡುವ ಮೂಲಕ ಸ್ವಾಗತಿಸುವ ಇತರ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಗ್ರಾಹಕ ದೂರುಗಳ ವೇದಿಕೆಯಲ್ಲಿ ಹಲವಾರು ಗ್ರಾಹಕರು ಈ ಸಂಸ್ಥೆಯ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. 10,000 ರೂಪಾಯಿಗಳ ಹೂಡಿಕೆಯೊಂದಿಗೆ ಸಾರ್ವಜನಿಕರನ್ನು ತಮ್ಮ ವ್ಯವಹಾರಕ್ಕೆ ಸೇರಲು ಆಮಿಷವೊಡ್ಡಿದ್ದಕ್ಕಾಗಿ ಮತ್ತು ಆಯೋಗದ ಪ್ರಸ್ತಾಪಗಳೊಂದಿಗೆ ಅವರನ್ನು ಮರುಳುಗೊಳಿಸಿ ಮೋಸ ಮಾಡಿದ ಕಾರಣಕ್ಕಾಗಿ ಸೇಫ್ ಶಾಪ್ ಇಂಡಿಯಾ ಕಂಪನಿಯ  ಹನ್ನೊಂದು ಕಾರ್ಯನಿರ್ವಾಹಕರನ್ನು 2019 ರಲ್ಲಿ ಹೈದರಾಬಾದ್ ಪೊಲೀಸರು ಬಂಧಿಸಿದ್ದರು ಎಂದು ವರದಿಯಾಗಿದೆ.

ಈ ಮೊದಲು, ಅದೇ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದಾಗ, ಅದು ಹತ್ರಾಸ್ ಅತ್ಯಾಚಾರಕ್ಕೊಳಗಾದ ದಲಿತ ಯುವತಿಯನ್ನು ಸನ್ಮಾನಿಸಲಾದ ವೀಡಿಯೊ ಎಂದು ಹೇಳಲಾಗಿತ್ತು.  ಅದರ ಬಗ್ಗೆ ಸತ್ಯ-ಪರಿಶೀಲನಾ ಲೇಖನವನ್ನು ಫ್ಯಾಕ್ಟ್ಲಿ ಪ್ರಕಟಿಸಿತ್ತು. ಅದನ್ನು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ‘ಸೇಫ್ ಶಾಪ್ ಇಂಡಿಯಾ’ ಇ-ಕಾಮರ್ಸ್ ಸಂಸ್ಥೆಯ ಕಾರ್ಯನಿರ್ವಾಹಕಿಯ ವಿಡಿಯೋವನ್ನು ಕೊಡಗು ಜಿಲ್ಲಾಧಿಕಾರಿ ಎಂದು ತಪ್ಪಾಗಿ ಚಿತ್ರಿಸಲಾಗಿದೆ.

– ಸೋಮಶೇಖರ್ ಚಲ್ಯ


ಇದನ್ನೂ ಓದಿ: Fact Check: ಮನಮೋಹನ್ ಸಿಂಗ್ ಬರ್ತಡೇ ಕೇಕ್ಅನ್ನು ರಾಹುಲ್‌ಗಾಂಧಿ ಕತ್ತರಿಸಿದ್ದರೇ??

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights