ಅರ್ನಬ್, ಅರ್ನಬ್, ಅರ್ನಬ್ ಎಂದೇ ಜಪಿಸುತ್ತಿದ್ದ ರಿಪಬ್ಲಿಕ್ ಟಿವಿ! 2 ದಿನಗಳಲ್ಲಿ ಮಾಡಿದ್ದೇನು ಗೊತ್ತಾ?
ಬುಧವಾರ ಅರ್ನಬ್ ಗೋಸ್ವಾಮಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಅರ್ನಬ್, ಅರ್ನಬ್, ಅರ್ನಬ್ ಎಂದೇ ಜಪಿಸುತ್ತಿದ್ದ ರಿಪಬ್ಲಿಕ್ ಟಿವಿ ಇದನ್ನು “ಬೃಹತ್ ಗೆಲುವು” ಎಂದು ಕರೆದು ಚಪ್ಪಾಳೆ ತಟ್ಟಿದೆ. ಅಲ್ಲದೆ, ರಿಪಬ್ಲಿಕ್ ಟಿವಿ ಚಾನೆಲ್ನ ಪರದೆಯ ಮೇಲೆ ಗೋಸ್ವಾಮಿ ಅರೆಸ್ಟ್ ಆಗಿ ಎಷ್ಟು ಗಂಟೆಗಳು, ನಿಮಿಷಗಳು, ಸೆಕೆಂಡುಗಳಾದವು ಎಂದು ತೋರಿಸುತ್ತಲೇ ಇತ್ತು. ರಿಪಬ್ಲಿಕ್ ಟಿವಿಯ ಆಂಕರ್ ರಿದಮ್ ಅವರ ಲೆಕ್ಕಾಚಾರದಂತೆ ಗೋಸ್ವಾಮಿ 08 ದಿನಗಳ ಕಾಲ ಆಥವಾ ಸುಮಾರು 150 ಗಂಟೆಗಳ ಕಾಲ ಜೈಲಿನಲ್ಲಿ ಕಾಲ ಕಳೆದಿದ್ದರು.
ರಿಪಬ್ಲಿಕ್ ಟಿವಿ ಮತ್ತು ರಿಪಬ್ಲಿಕ್ ಭಾರತ್ ಚಾನೆಲ್ಗಳು ಗೋಸ್ವಾಮಿಯ ಬಂಧನವನ್ನು ಭಾರತವೇ ಬಂಧನದಲ್ಲಿದೆ ಎಂಬತೆ ಬಿಂಬಿಸುತ್ತಾ ಪ್ಯಾನೆಲ್ನಲ್ಲಿ ಕುಳಿತು ಚೀರಾಟ ನಡೆಸುತ್ತಿದ್ದವು. ಗೋಸ್ವಾಮಿ ಎಂದಿಗೂ ನಮ್ಮಿಂದ ದೂರವಾಗಿಲ್ಲ, ಅವರು ತಮ್ಮ ಚಾನೆಲ್ನ ಫುಟೇಜ್ಗಳ ಮೂಲಕ ನಮ್ಮೊಂದಿಗೆ ಇದ್ದರು ಇಂದು ಆಂಕರ್ ಹೇಳಿದರು. ಮತ್ತೊಬ್ಬ ಆಂಕರ್ “ಎಂದಿಗೂ ನಾವು ಹಸುವಾಗುವುದಿಲ್ಲ, ಎಂದೂ ಹಸುವಾಗುದಿಲ್ಲ” ಎಂದು ಕಣ್ಣೀರು ಒರೆಸಿಕೊಳ್ಳುತ್ತಾ ಹೇಳಿದರು.
ಅರ್ನಬ್ ಇಲ್ಲದೇ ರಿಪಬ್ಲಿಕ್ ಟಿವಿಗೆ ಭವಿಷ್ಯವಿದೆಯೇ? ಹೌದು, ಅವರು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿರಬಹುದು. ಅದರೆ, ಅವರು ಆ ವಿಡಿಯೋ ಫೂಟೇಜ್ಗಳಲ್ಲಿ ನಮ್ಮೊಂದಿಗಿದ್ದಾರೆ ಎಂದು ಆಂಕರ್ಗಳು ಕಿರುಚುತ್ತಿದ್ದರು. ಮುಖ್ಯಾಂಶಗಳಲ್ಲಿ ಅರ್ನಬ್ ಜಾಮೀನು ಪಡೆದರೂ ಎಂದೂ, ಹ್ಯಾಶ್ಟ್ಯಾಗ್ನಲ್ಲಿ #ArnabIsBack (ಅರ್ನಬ್ ಮರಳಿದ್ದಾರೆ) ಎಂದೂ, ರಿಪಬ್ಲಿಕ್ ಟಿವಿಯ ಪ್ರತಿಯೊಬ್ಬರ ಬಾಯಲ್ಲೂ ಅರ್ನಬ್ ಗೋಸ್ವಾಮಿ ಹಿಂದಿರುತ್ತಿರುವುದನ್ನು ನಾವು ಕುತೂಹಲದಿಂದ ಕಾಯುತ್ತಿದ್ದೇವೆ ಎಂಬುದೇ ಆಗಿತ್ತು.
ಅರ್ನಾಬ್ ಎಂದಿಗೂ ಎಲ್ಲಿಗೂ ಹೋಗಲಿಲ್ಲ:
ನಿಜ ಹೇಳಬೇಕೆಂದರೆ, ಅರ್ನಬ್ ಎಲ್ಲಿಗೂ, ಎಂದಿಗೂ ಹೋಗಲಿಲ್ಲ. ಈ ಸಂದರ್ಭದಲ್ಲಿ ನಾವು ಅವರನ್ನು ಹೆಚ್ಚು ನೋಡಿದ್ದೇವೆ. ಅವರು ಜೈಲಿನಲ್ಲಿದ್ದಾಗ ಅವನ ಬಗ್ಗೆ ಹೆಚ್ಚು ಕೇಳಿದ್ದೇವೆ. ಕಳೆದ ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದಾಗ, ರಿಪಬ್ಲಿಕ್ ಟಿವಿಯ ಪ್ರತಿ ಜಾಹೀರಾತು ಬ್ರೇಕ್ನಲ್ಲೂ ‘ಯಾವುದೇ ಭಯವಿಲ್ಲ’ ಎಂಬ ಘೋಷಣೆಯೊಂದಿಗೆ ನಾವು ಪ್ರತಿ ಅರ್ನಬ್ ಮುಖವನ್ನು ನೋಡಿದ್ದೇವೆ. ಆತನ ಅಪಾರ್ಟ್ಮೆಂಟ್ನಲ್ಲಿ ಪೊಲೀಸರ ವೀಡಿಯೊಗಳನ್ನು ನಾವು ನೋಡಿದ್ದೇವೆ, ಆತನ ಬಂಧನಕ್ಕೆ ಸ್ವಲ್ಪ ಮೊದಲು; ಗೋಸ್ವಾಮಿಗೆ ಪೆಟ್ಟಾದ ತೋಳು ಮತ್ತು ಕಾಲ್ಚೀಲದ ಪಾದಗಳ ಬಗ್ಗೆ ಹೇಳುತ್ತಾ “ನನ್ನ ಜೀವಕ್ಕೆ ಅಪಾಯವಿದೆ …” ಎಂದು ಕೂಗುತ್ತಿದ್ದರು. ಅವರನ್ನು ತಾಲೋಜ ಜೈಲಿಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ: ಗೋಸ್ವಾಮಿಯನ್ನು ಸಮರ್ಥಿಸಿಕೊಳ್ಳಲು ಸುಳ್ಳು ಸುದ್ದಿ ಪ್ರಕಟಿಸಿದ OpIndia ಸುದ್ದಿಸೈಟ್!
ರಿಪಬ್ಲಿಕ್ ಟಿವಿ ನೌಕರರು ಸೇರಿದಂತೆ ಹಲವರು ಗೋಸ್ವಾಮಿ ಟೀ ಶರ್ಟ್ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು, ಹೈದರಾಬಾದ್, ಚಂಡೀಗಡ, ಪಾಟ್ನಾ, ಅಯೋಧ್ಯೆ, ಭೋಪಾಲ್, ಮುಂಬೈ, ದೆಹಲಿ ಮತ್ತು ಹಲವೆಡೆ ‘ವಿ ಫಾರ್ ವಿಕ್ಟರಿ’ ಚಿಹ್ನೆಯನ್ನು ತೋರಿಸಿ “ನಾವು ತಲೆಬಾಗುವುದಿಲ್ಲ” ಎಂದು ಕೂಗಿದ್ದನ್ನೂ ನಾವೂ ನೋಡಿದ್ದೇವೆ.
ಈ ದೃಶ್ಯಗಳನ್ನು ರಿಪಬ್ಲಿಕ್ ಟಿವಿಯಲ್ಲಿ ಪುನರಾವರ್ತಿಸಲಾಗಿದೆ, ಪತ್ರಿದಿನ, ಪ್ರತಿ ಗಂಟೆ-ಗಂಟೆಗೂ ಅರ್ನಬ್ ವಿಚಾರದ ಬಗ್ಗೆ ರಿಪಬ್ಲಿಕ್ ಟಿವಿ ಮತ್ತು ರಿಪಬ್ಲಿಕ್ ಭಾರತ್ನ ನಿರೂಪಕರು ಮತ್ತು ವರದಿಗಾರರಾದ ನಿರಂಜನ್, ಐಶ್ವರ್ಯಾ, ಅಭಿಷೇಕ್, ಸಾಗರಿಕಾ, ಶಿವಾನಿ, ರಿದಮ್, ಸುಚರಿತಾ ಮತ್ತು ಪ್ರದೀಪ್ ಚಕ್ರವರ್ತಿ ಇತರರು “ಅರ್ನಾಬ್, ಅರ್ನಾಬ್, ಅರ್ನಾಬ್” ಎಂದು ಚೀರುತ್ತಾ, ತಮ್ಮ ಹಾರಾಟ ಚೀರಾಟಗಳಲ್ಲಿ ಗೋಸ್ವಾಮಿಯನ್ನೂ ಮೀರಿಸುವ ಹಂತಕ್ಕೆ ತಮ್ಮ ಪ್ರತಿಭೆಯನ್ನು ಪ್ಯಾನೆಲ್ನಲ್ಲಿ ತೋರಿಸಿದ್ದರು. ಈ ಕಾರಣಕ್ಕಾಗಿ ಎಂದಿಗೂ-ಎಲ್ಲಿಯೂ ಹೋಗಿರಲಿಲ್ಲ.
ಅರ್ನಾಬ್ ಅನ್ನು ಬಿಡುಗಡೆ ಮಾಡಿ, ‘ಜಾಗತಿಕ’ ಅಭಿಯಾನ
ರಿಪಬ್ಲಿಕ್ ಟಿವಿಯ ನ್ಯೂಸ್ ರೂಂ ‘ಅರ್ನಾಬ್ ಬಿಡುಗಡೆ’ ಮಾಡಲು ‘ಏಕ ವ್ಯಕ್ತಿ ಭಕ್ತಿ’ ಅಭಿಯಾನಗಳನ್ನು ಅನುಸರಿಸಿತು. ಬಿಹಾರ ಚುನಾವಣೆಯನ್ನು ಹೊರತು ಪಡಿಸಿ, ಉಳಿದೆಲ್ಲಾ ಬೆಳವಣಿಗೆಗಳನ್ನು ನಿರ್ಲಕ್ಷಿಸಿ ಅರ್ನಬ್ ಎಂದೇ ಬಡಿದುಕೊಳ್ಳುತ್ತಿತ್ತು.
ಪ್ರತಿ ಬಾರಿಯೂ, ಅವರು “ನನ್ನ ಅಣ್ಣ ಅರ್ನಾಬ್, “ಪ್ರತಿಯೊಬ್ಬ ತಾಯಿಯ ಮಗ ಅರ್ನಾಬ್…’ ಎಂದು ಕೂಗುತ್ತಾ, ಕಾರಣದ ಪರಾಮರ್ಶೆಯನ್ನೇ ಮರೆತ್ತಿತ್ತು. ಅರ್ನಬ್ ಜೈಲು ವಾಸದ ಬಗೆಗೆ ಪ್ಯಾನಲ್ಗಳನ್ನು ನಡೆಸಿತು.
ಇದನ್ನೂ ಓದಿ: ಟಿಆರ್ಪಿ ಹಗರಣ: ಗೋಸ್ವಾಮಿಗೆ ಒಂದೆಡೆ ಪೊಲೀಸ್, ಮೊತ್ತೊಂದೆಡೆ ಇಂಡಿಯಾ ಟುಡೆ ಚಾರ್ಜ್!
ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯು ಬೆಳಗ್ಗೆಯಿಂದ ಸಂಜೆಯವೆಗೂ ನಡೆಯಿತು. ಅಂದು ಬೆಳಗ್ಗೆಯೇ ಪೊಲೀಸ್ ಠಾಣೆಯ ಹೊರಗೆ ಜಾಗರೂಕರಾಗಿ ನಿಂತಿದ್ದರು. ಪೊಲೀಸ್ ವ್ಯಾನ್ಗಳು ಅರ್ನಬ್ರನ್ನು ಕರೆದೊಯ್ಯತ್ತಿದ್ದಂತೆ, ವಾಹದ ಹಿಂದೆಯೇ ಓಡಲಾರಬಿಂಸಿದರು. “ಅರ್ನಬ್ ಅವರ ಹೋರಾಟ ಭಾರತದ ಅವರ ಹೋರಾಟ” ಎಂದು ಅವರು ಪ್ರತಿ ಗಂಟೆಗೆ ಘೋಷಿಸಿದರು, ಅರ್ನಾಬ್ ಪ್ರತಿಯೊಬ್ಬ ಭಾರತೀಯನನ್ನು ಪ್ರತಿನಿಧಿಸುತ್ತಾನೆ ಎಂದು ಹೇಳಿದರು.
ಅರ್ನಬ್ ಬಿಡುಗಡೆಗಾಗಿ ರಾಷ್ಟ್ರವ್ಯಾಪಿ ಮಾತ್ರವಲ್ಲ, ಜಾಗತಿಕವಾಗಿ ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಟೆಕ್ಸಾಸ್, ಯುಕೆ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಿಂದಲೂ ಅಭೂತಪೂರ್ವ ಬೆಂಬಲವಿದೆ ಎಂದು ಎರಡೂ ಚಾನೆಲ್ಗಳು ಹೇಳಿದವು. ಆದರೆ, ನ್ಯೂಜೆರ್ಸಿಯ ಕೆಲವು ಭಾರತೀಯರು, ಈ “ಅಕ್ರಮ ಬಂಧನಕ್ಕಾಗಿ”ಮಹಾರಾಷ್ಟ್ರ ಸರ್ಕಾರದ ಮಂತ್ರಿಗಳಿಗೆ ವೀಸಾ ನಿರಾಕರಿಸುವಂತೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ಗೆ ಪತ್ರ ಬರೆಯಲು ಯೋಜಿಸಲಾಗಿದೆ ಎಂದಷ್ಟೇ ತಿಳಿಸಲಾಗಿತ್ತು.
ಭಾರತದಲ್ಲಿ ಒಂದಷ್ಟು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದವು, ಪತ್ರಕರ್ತರು ಅರ್ನಾಬ್ ಅವರೊಂದಿಗೆ ಒಗ್ಗಟ್ಟಿನಿಂದ ನಿಂತು, ಬಂಧನವನ್ನು ವಿರೋಧಿಸಿದರು. ಆದರೆ, ಅದೇ ಪತ್ರಕರ್ತರು ಮತ್ತು ಚಾನೆಲ್ಗಳು, ಈಗಲೂ ಬಂಧನದಲ್ಲಿರುವ, ಜನಪರ ದನಿ ಎತ್ತಿದ ಕಾರಣಕ್ಕಾಗಿ ಬಂಧಿಸಲ್ಪಟ್ಟ ಪತ್ರಕರ್ತರ ಬಂಧನದ ಬಗ್ಗೆ ಯಾವುದೇ ಪ್ರತಿಭಟನೆ ನಡೆಸದೇ ಇರುವುದು ಶೋಚನೀಯ.
ಕೃಪೆ: ದಿ ಪ್ರಿಂಟ್
ಇದನ್ನೂ ಓದಿ: ನಾವು ರಿಪಬ್ಲಿಕ್ ಟಿವಿ ನೋಡುವುದಿಲ್ಲ; ಗೋಸ್ವಾಮಿಯನ್ನು ಗುರಿಮಾಡಿರುವುದು ತಪ್ಪು: ಸುಪ್ರೀಂ ಕೋರ್ಟ್