ಮರಾಠಿ ಪ್ರಾಧಿಕಾರ ರಚನೆಗೆ ವಿರೋಧಿಸಿ ನಾಳೆ ಕರ್ನಾಟಕ ಬಂದ್ : ಏನೇನಿರುತ್ತೆ ? ಏನೇನಿರಲ್ಲ..?

ಮರಾಠಿ ಪ್ರಾಧಿಕಾರ ರಚನೆಗೆ ವಿರೋಧಿಸಿ ಕನ್ನಡ ಪರ  ಹೋರಾಟಗಾರ ವಾಟಾಳ್ ನಾಗರಾಜ್ ನಾಳೆ (ಡಿ5) ಬಂದ್ ಗೆ ಕರೆ ಕೊಟ್ಟಿದ್ದಾರೆ. ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಕನ್ನಡ ಪರ ಸಂಘಟನೆಗಳು ಇದಕ್ಕೆ ಸಾಥ್ ನೀಡಿದ್ದರೆ, ಆಟೋ, ಲಾರಿ, ಪೆಟ್ರೋಲ್, ಹಾಲು, ಸಣ್ಣ ವ್ಯಾಪಾರಿ ಸಂಘ- ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸುತ್ತವೆ ಎನ್ನುವ ಗೊಂದಲ ಉಂಟಾಗಿದೆ.

ನಾಳೆ ಕರ್ನಾಟಕ ಬಂದ್ ಆಗುತ್ತಾ..? ಸಂಪೂರ್ಣ ಬೆಂಬಲ ಸಿಗುತ್ತಾ..? ಅಥವಾ ಇಲ್ವಾ ಅನ್ನೋ ಅನುಮಾನ ಇನ್ನೂ ಕೂಡ ಹಾಗೇ ಇದೆ. ಸಂಜೆ 4 ಗಂಟೆಗೆ ಮಾಲ್ ಅಸೋಷಿಯೇಷನ್, ಕೆಆರ್ ಮಾರುಕಟ್ಟೆ ವ್ಯಾಪಾರಿಗಳ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಫೈನಲ್ ಮೀಟಿಂಗ್ ಮಾಡಲಿದ್ದಾರೆ. ಹೀಗಾಗಿ

ನಾಳಿ ಬಂದ್ ಮಾಡಲು ಇವೆಲ್ಲ ಸಂಘಟನೆಗಳ ಸಹಕಾರ ಅತ್ಯಗತ್ಯವಾಗಿದೆ. ಆದರೆ ಈಗಾಗಲೇ ಕೊರೊನಾ ಆರ್ಥಿಕ ಸಂಕಷ್ಟದಲ್ಲಿರುವ ಜನರು ಬಂದ್ ಗೆ ಬೆಂಬಲು ಸೂಚಿಸಲು ನಿರಾಕರಿಸಿದ್ದಾರೆ. ಹೀಗಾಗಿ ಯಾವ ಸಂಘಟನೆಗಳು ಬೆಂಬಲ ಕೊಡಲಿದ್ದಾರೆ ಅನ್ನೋ ಅನುಮಾನ ಶುರುವಾಗಿದೆ. ಬಂದ್ ಬಿಟ್ಟು ಬೇರೆ ರೀತಿ ಸರ್ಕಾರದ ಗಮನ ಸೆಳೆಯೋಣ ಒಂದು ಹಲವಾರು ಸಂಘ ಸಂಘಟನೆಗಳು ಮಿಶ್ರ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.

ನಾಳೆ ಬಸ್ ಸಂಚಾರ, ಮೆಟ್ರೋ, ಓಲಾ, ಊಬರ್ ಇರುತ್ತಾ ಎನ್ನುವ ಅನುಮಾನ ಇದೆ. ಇತ್ತ ಸರ್ಕಾರ ಬಲವಂತವಾಗಿ ಬಂದ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದೆ. ಬಂದ್ ಪ್ರತಿಭಟನೆಗೆ ಅವಕಾಶ ಕೊಡಿ. ಆದರೆ ಕಲ್ಲು ತೂರಾಟ, ಅಹಿತಕರ ಘಟನೆಗಳನ್ನು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ.

ಆದರೆ ಬಹುತೇಕ ಸಂಘ-ಸಂಘಟನೆಯ ಅಧ್ಯಕ್ಷರು ಕೊರೊನಾ ಪರಿಣಾಮ ಆರ್ಥಿಕ ಸಂಕಷ್ಟದಲ್ಲಿ ಬಂದ್ ಗೆ ಸಂಪೂರ್ಣ ಬೆಂಬಲ ಸೂಚಿಸುವುದಕ್ಕಿಂತ ನೈತಿಕ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ಕೆಲ ಸಂಘಟನೆಗಳು ಇಂದು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights