ರೈತರು ಸುಮ್ಮನೆ ಪ್ರತಿಭಟನೆ ಮಾಡುತ್ತಾರೆ; ಅವರನ್ನು ಭೇಟಿ ಮಾಡೋಕೆ ಹೋಗಲ್ಲ: ಸಚಿವ ಬಿ.ಸಿ ಪಾಟೀಲ್

ರೈತರು ಸುಮ್ಮನೆ ಪ್ರತಿಭಟನೆ ಮಾಡುತ್ತಲೇ ಇರುತ್ತಾರೆ. ಅವರು ಪ್ರತಿಭಟನೆ ಮಾಡಿದಾಗಲೆಲ್ಲಾ ಹೋಗೋಕೆ ಆಗೋದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಮತ್ತು ಸಂಘಟನೆಗಳಿಗೆ ಕಾಂಗ್ರೆಸ್‌ ಮತ್ತು ಹಲವು ಪಕ್ಷಗಳು ಬೆಂಬಲ ನೀಡಿವೆ. ಈ ಪ್ರತಿಭಟನೆ ರಾಜಕೀಯ ಪ್ರೇರಿತವಲ್ಲದೇ ಮತ್ತೇನು? ಅವರ ಪ್ರತಿಭಟನೆ ಮಾಡಿದಾಗೆಲ್ಲಾ ಹೋಗೋಕೆ ಆಗೋದಿಲ್ಲ. ನಾನು ಅಲ್ಲಿಗೆ ಹೋಗುವುದಕ್ಕೆ ಮೊದಲು ಸಿಎಂ ಯಡಿಯೂರಪ್ಪ ನನಗೆ ಹೇಳಬೇಕು. ಆಗ ನಾನು ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ.

ಭೂಸುಧಾರಣಾ ತಿದ್ದುಪಡಿ ಮಸೂದೆ  ಮತ್ತು ಎಪಿಎಂಸಿ ವಿಧೇಯಕಗಳು ಉಭಯ ಸದನಗಳಲ್ಲಿ ಅಂಗೀಕಾರವಾಗಿವೆ. ಈ ವಿಚಾರವಾಗಿ ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿದೆ. ರೈತರು ಚರ್ಚೆಗೆ ಸಿದ್ಧರಿದ್ದರೆ ನಾವೂ ಅವರೊಂದಿಗೆ ಚರ್ಚೆ ಮಾಡಲು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸಿಎಂ ಹೇಳುವವರೆಗೂ ನಾನು ಪ್ರತಿಭಟನಾ ಸ್ಥಳಕ್ಕೆ ಹೋಗೋದಿಲ್ಲ ಎಂದು ಹೇಳಿರುವ ಸಚಿವ ಬಿ.ಸಿ ಪಾಟೀಲ್‌, ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ.


ಇದನ್ನೂ ಓದಿ: ರಾಜಧಾನಿಯಲ್ಲಿ ಭುಗಿಲೆದ್ದ ರೈತರ ಆಕ್ರೋಶ; ರಾಜಭವನಕ್ಕೆ ರೈತರ ಮುತ್ತಿಗೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights