ಪುರಸಭೆ ಕಟ್ಟದ ಮೇಲೆ ‘ಜೈ ಶ್ರೀರಾಮ್’ ಬ್ಯಾನರ್; ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್‌!

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಪಲಕ್ಕಾಡ್‌ ಪುರಸಭೆಯಲ್ಲಿ ಬಿಜೆಪಿ ಮೈತ್ರಿಕೂಟ ಗೆಲುವು ಸಾಧಿಸಿದೆ. ಗೆದ್ದ ನಂತರ ಪುರಸಭೆ ಕಚೇರಿ ಮೇಲೆ “ಜೈ ಶ್ರೀರಾಮ್’ ಮತ್ತು ವಂದೇ ಮಾತರಂ ಘೋಷಣೆಯುಳ್ಳ ಬ್ಯಾನರ್‌ ಅನ್ನು ಬಿಜೆಪಿ ಕಾರ್ಯಕರ್ತರು ಹಾಕಿದ್ದು, ಅವರ ವಿರುದ್ದ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಪಲಕ್ಕಾಡ್‌ ಪ್ರದೇಶದಲ್ಲಿನ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನ ನಡೆದಿದೆ ಎಂದು ಪುರಸಭೆ ಕಾರ್ಯದರ್ಶಿ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ಕೇಸ್‌ ದಾಖಲಿಸಿದ್ದಾರೆ.

ಪುರಸಭೆಯಲ್ಲಿ ಗೆಲುವು ಸಾಧಿಸಿದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪುರಸಭೆ ಕಟ್ಟದ ಮೇಲೆ “ಜೈ ಶ್ರೀರಾಮ್” ಘೋಷಣೆಯ ಜೊತೆಗೆ ಛತ್ರಪತಿ ಶಿವಾಜಿ ಅವರ ಚಿತ್ರವುರ್ಳಳ ಬ್ಯಾನರ್‌ಅನ್ನು ಬಿಜೆಪಿ ಕಾರ್ಯರ್ಕರು ಹಾಕಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇರುವ ಮತ್ತೊಂದು ಬ್ಯಾನರ್ ಅನ್ನೂ ಕೂಡ ಹಾಕಿರುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ವಿಶೇಷ ವಿಭಾಗದ ಉಪ ಮಹಾನಿರ್ದೇಶಕರು ಸೂಚಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್ ದಾಸ್ ಎಸ್ ತಿಳಿಸಿದ್ದಾರೆ.

ಪಲಕ್ಕಾಡ್ ಪುರಸಭೆ ಚುನಾವಣೆಯಲ್ಲಿ 52 ಸ್ಥಾನಗಳಲ್ಲಿ 28 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.


ಇದನ್ನೂ ಓದಿ: ಕೇರಳ ಚುನಾವಣೆ: LDF & UDFಗೆ ಭರ್ಜರಿ ಗೆಲುವು; ಬಿಜೆಪಿಗೆ ಮುಖಭಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights