ರಮೇಶ್ ಜಾರಕಿಹೊಳಿ ಪರ ಶಾಸಕ ರಾಜುಗೌಡ ಬ್ಯಾಟಿಂಗ್: ತನಿಖೆಗಾಗಿ ಸರ್ಕಾರಕ್ಕೆ ಮನವಿ!

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ರಾಜಕೀಯ ಪಿತೂರಿಯಾಗಿದೆ. ಇದನ್ನು ತನಿಖೆ ಮಾಡಬೇಕೆಂದು ಒತ್ತಾಯಿಸಿ  ರಮೇಶ್ ಜಾರಕಿಹೊಳಿ ಪರ ಶಾಸಕ ರಾಜುಗೌಡ ಬ್ಯಾಟಿಂಗ್ ಮಾಡಿದ್ದಾರೆ.

ಇಂದು ಮಾದ್ಯಮಕ್ಕೆ ಮಾತನಾಡಿದ ರಾಜುಗೌಡ, ” ರಮೇಶ್ ಅಣ್ಣ ಬೆಳೆಯುತ್ತಿದ್ದರು. ಇದನ್ನ ಕೆಲವರು ಸಹಿಸಲಿಲ್ಲ. ಹೀಗಾಗಿ ಪಿತೂರಿ ಮಾಡಿ ಅವರ ವೈಯಕ್ತಿ ವಿಚಾರವನ್ನು ಬಯಲಿಗೆಳಿದಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ವ್ಯವಸ್ಥಿತವಾಗಿ ಪಿತೂರಿ ಮಾಡಲಾಗಿದೆ ” ಎಂದು ದೂರಿದ್ಧಾರೆ.

ಮಾತ್ರವಲ್ಲದೇ “ ದಿನೇಶ್ ಕಂಪ್ಲೆಂಟ್ ಕೊಟ್ಟಿದ್ದಾರೆ. ಅವರು ಸಿಡಿ ಕೊಟ್ಟು ದೂರು ನೀಡುವ ಮುನ್ನವೇ ಎಲ್ಲಾ ಕಡೆ ಸಿಡಿ ಪಬ್ಲಿಷ್ ಆಗಿದೆ. ವಾಟ್ಸಪ್ ನಲ್ಲೇ ಒಂದು ಇಮೇಜ್ 5 ಸಲ ಮಾತ್ರ ಹಳುಹಿಸಲು ಸಾಧ್ಯ. ಹೀಗಿರುವಾಗ ಸಿಡಿ ದೂರಿಗೂ ಮುನ್ನ ಎಲ್ಲಾ ಕಡೆ ಹರಿದಾಡಿದೆ. ರಮೇಶ್ ಬೆಳೆಯುವುದನ್ನ ತಡಿಯುವುದಕ್ಕೆ ಷಡ್ಯಂತರ ಮಾಡಲಾಗಿದೆ. ಸಿಡಿ ದೃಶ್ಯ ಹಂಚಿಕೆಗಾಗೇ ವಿದೇಶದಲ್ಲಿ ಸರ್ವರ್ ಬುಕ್ ಮಾಡಿ ವಿಡಿಯೋ ಹಂಚಿಕೆ ಮಾಡಲಾಗಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ಬೇಕು. ಇಷ್ಟು ಹಣ ಇವರಿಗೆ ಎಲ್ಲಿಂದ ಬಂತು? ಎಂದು ಪ್ರಶ್ನೆ ಮಾಡಿದ್ದಾರೆ.

ವೀಡಿಯೋದಲ್ಲಿ ಅವರ ಮಾತು ಕೇಳಿದರೆ ನಿಮಗೆ ಏನ್ ಅನ್ಸುತ್ತದೆ? ಅದರಲ್ಲಿ ಅವರಿಬ್ಬರ ನಡುವೆ ಒಮ್ಮತದ ಮಾತುಗಳ ದಾಟಿ ಇದೆ. ಇದನ್ನ ರಾಜಕೀಯವಾಗಿ ಬಳಸಿಕೊಳ್ಳಲಾಗಿದೆ. ರಮೇಶಣ್ಣ ಅವರು ತಪ್ಪು ಮಾಡಿದರೆ ಗಲ್ಲಿಗೇರಿಸಿ ಎಂದು ಹೇಳಿದ್ದಾರೆ.

ಸಿಡಿ ಬಿಡುಗಡೆಯಲ್ಲಿ ಯಾರ ಕೈವಾಡವೆಂದು ಬಹಿರಂಗವಾಗಬೇಕು. ರಮೇಶ್ ಅವರು ಬಂದಿದ್ದಕ್ಕೆ ಬಿಜೆಪಿ ಸರ್ಕಾರ ಬಂದಿದೆ. ಹೀಗಾಗಿ ನಾವು ಬಿಜೆಪಿ ವಿರುದ್ಧ ಮಾತನಾಡುವುದಿಲ್ಲ. ಸಿಡಿ ತನಿಖೆ ಆಗಿಬೇಕು. ಸಿಬಿಐ ತನಿಖೆ ಆಗಬೇಕು ಎಂದು ನಾವೆಲ್ಲಾ ಮನವಿ ಪತ್ರ ಕೊಡುತ್ತಿದ್ದೇವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights