ರಮೇಶ್ ರಾಸಲೀಲೆ ಪ್ರಕರಣ : ‘ಬೆದರಿಕೆ ಕರೆ ಹೆಚ್ಚಾಗುತ್ತಿದೆ ಹೆಚ್ಚಿನ ಭದ್ರತೆ ಕೊಡಿ’- ದಿನೇಶ್ ಕಲ್ಲಹಳ್ಳಿ ಮನವಿ
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ದಿನೇಶ್ ಕಲ್ಲಹಳ್ಳಿ ಗೆ ಬೆದರಿಕೆ ಕರೆ ಹೆಚ್ಚಾಗುತ್ತಿದ್ದು ಹೆಚ್ಚಿನ ಭದ್ರತೆಗೆ ಮನವಿ ಮಾಡಿದ್ದಾರೆ.
ಹೌದು.. ಮೊನ್ನೆಯಷ್ಟೇ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ರಮೇಶ್ ಜಾರಕಿಹೊಳಿ ರಾಸಲೀಲೆ ವೀಡಿಯೋ ಬಿಡುಗಡೆಯಾದ್ದರಿಂದ ಬಿಜೆಪಿ ಪಕ್ಷಕ್ಕೆ ಭಾರೀ ಮುಜುಗರ ತಂದಿದೆ. ಜಾರಕಿಹೊಳಿಗೂ ಇದು ನುಂಗಲಾರದ ತುತ್ತಾಗಿದೆ. ಸಹಿಸಲಾಗದಷ್ಟು ದ್ವೇಷ ಹುಟ್ಟಿಸಿದೆ.
ಇದರಿಂದ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಗೆ ಜೀವ ಬೆದರಿಕೆ ಕರೆ ಬರುತ್ತಿವೆ. ಈ ಬಗ್ಗೆ ಮಾದ್ಯಮಕ್ಕೆ ಮಾತನಾಡಿದ ದಿನೇಶ್, ” ನನಗೆ ಬೆದರಿಕೆ ಕರೆ ಅಧಿಕವಾಗಿವೆ. ಮನೆ ಮುಂದೆ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದಾರೆ. ಹೀಗಾಗಿ ನಾನು ಇಂದು ವಿಚಾರಣೆಗೆ ಹಾಜರಾಗುವುದಿಲ್ಲ. ನನಗೆ ಹೆಚ್ಚಿನ ಭದ್ರತೆ ಅವಶ್ಯಕತೆ ಇದೆ. ಇದನ್ನು ಪೊಲೀಸರ ಮುಂದೆ ಪ್ರಸ್ತಾಪ ಮಾಡಿದ್ದೇನೆ ” ಎಂದು ದಿನೇಶ್ ಹೇಳಿದ್ಧಾರೆ.
ಸದ್ಯಕ್ಕೆ ಇಬ್ಬರು ಪೊಲೀಸರು ಮನೆ ಮುಂದೆ ಕಾವಲಿದ್ದಾರೆ. ಆದರೆ ಅವರು ಸಾಕಾವುದಿಲ್ಲ. ವೈಯಕ್ತಿಕ ಭದ್ರತೆ ಇಲ್ಲದೇ ನಾನು ಹೊರಬರುವುದಿಲ್ಲ. ಮನೆ ಮುಂದೆ ಅಪರಿಚಿತರು ಓಡಾಡುತ್ತಿದ್ದಾರೆ. ಫೋನ್ ಕರೆ ಗಳು ಬರುತ್ತಿವೆ ಎಂದಿದ್ದಾರೆ.
ಈ ಎಲ್ಲಾ ಬದಲಾವಣೆಗಳನ್ನು ನೋಡಿದರೆ ರಮೇಶ್ ಸೆಕ್ಸ್ ಸಿಡಿ ರಿಲೀಸ್ ಬೆನ್ನಲ್ಲೆ ದಿನೇಶ್ ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಒಂದು ವೇಳೆ ದಿನೇಶ್ ವಿಚಾರಣೆಗೆ ಹಾಜರಾಗದೆ ಇದ್ದರೆ, ರಾಸಲೀಲೆಯ ಯುವತಿಯ ಸಮ್ಮತಿಯಿಂದ ರಾಸಲೀಲೆ ನಡೆದಿದೆ ಎಂದು ಹೇಳಿದರೆ ದಿನೇಶ್ ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.