ಸಿಡಿ ಮಾಸ್ಟರ್ ಮೈಂಡ್ ಜೊತೆ ಡಿಕೆಶಿ ಫೋಟೋ ಶೇರ್ ಮಾಡಿದ ಕಮಲಕ್ಕೆ ‘ಕೈ’ ತಿರುಗೇಟು!

ಸಾಹುಕಾರನ ಸಿಡಿ ವಿಚಾರ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸಿಡಿ ಮಾಸ್ಟರ್ ಮೈಂಡ್ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇರುವ ಫೋಟೋ ಬಿಜೆಪಿ ಹಂಚಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಬಿಜೆಪಿ ನಾಯಕರು ಆರೋಪಿಗಳ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದೆ.

ಹೌದು… ಸಿಡಿ ಹಿಂದೆ ಮಹಾನಾಯಕನಿದ್ದಾನೆ ಎನ್ನುವ ಗುಮಾನಿಗೆ ತೆರೆ ಎಳೆಯಲು ಮುಂದಾದ ಬಿಜೆಪಿಗೆ ಕಾಂಗ್ರೆಸ್ ಟ್ವೀಟ್ ಮೂಲಕವೇ ಉತ್ತರ ಕೊಟ್ಟಿದೆ.

ಅದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್, ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿರುವ ಭ್ರಷ್ಟಾಚಾರ ಆರೋಪಿ ಮಹಾ ನಾಯಕ” ಎನ್ನುವ ಮೂಲಕ ನಿಮ್ಮದೇ ಪಕ್ಷದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರತ್ತ ಏಕೆ ಪರೋಕ್ಷವಾಗಿ ಗುರಿ ಇಡುತ್ತಿದ್ದೀರಿ?! ಎಂದು ಪ್ರಶ್ನಿಸಿ ಲೇವಡಿ ಮಾಡಿತ್ತು.

ಮಾತ್ರವಲ್ಲದೇ ದೇಶದ್ರೋಹಿ ಬಾಬಾ ಅಸಾರಂ ಜೊತೆಗೆ ಪ್ರಧಾನಿ ಮೋದಿಗೂ ಏನು ಸಂಬಂಧ, ತೇಜಸ್ವಿ ಸೂರ್ಯಗೂ ಡ್ರಗ್ ಡೀಲರ್ ಹಾಗೂ ಸಂಸದ ಪ್ರತಾಪ್ ಸಿಂಹ ಮತ್ತು ಬಂಧಿಸಲ್ಪಟ್ಟವನಿಗೂ ಎನ್ ಸಂಬಂಧ ಎಂದು ಪ್ರಶ್ನಿಸಿದೆ.

ಇದೆಲ್ಲವೂ ನನ್ನನ್ನು ಸಿಲುಕಿಸುವ ಪ್ರಯತ್ನ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights