ಇಷ್ಟು ದಿನ ಯುವತಿ ಪೋಷಕರು ಡಿಕೆಶಿ ಒತ್ತಡವಿದೆ ಎಂದು ಯಾಕೆ ಹೇಳಿಲ್ಲ?- ವಕೀಲ ಜಗದೀಶ್ ಪ್ರಶ್ನೆ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಯಾಗಿ ಹಲವಾರು ದಿನಗಳು ಕಳೆದ ಬಳಿಕ ಯುವತಿ ಪೋಷಕರು ಡಿಕೆ ಶಿವಕುಮಾರ್ ನಿಂದ ನನ್ನ ಮಗಳನ್ನು ಕಾಪಾಡಿ ಎನ್ನುವ ಹೇಳಿಕೆಯನ್ನು ಕೊಟ್ಟಿದ್ದು ಇದಕ್ಕೆ ಯುವತಿ ಪರ ವಕೀಲ ಜಗದೀಶ್ ಗರಂ ಆಗಿದ್ದಾರೆ.

ಹೌದು…. ಯುವತಿ ಪೋಷಕರು ಮೊನ್ನೆಯಷ್ಟೇ ಮಾಧ್ಯಮದ ಮುಂದೆ ಮಾತನಾಡಿ, ಸಿಡಿ ಬಿಡುಗಡೆಯಾದ ನಂತರ ಯುವತಿ ಪೋಷಕರಿಗೆ ಕರೆ ಮಾಡಿ ತಾನು ಡಿಕೆ ಶಿವಕುಮಾರ್ ಬಳಿ ಹೋಗುವುದಾಗಿ ಹೇಳಿದ್ದಂಳತೆ. ಯುವತಿ ಹೇಳಿದ ಈ ಹೇಳಿಕೆಯನ್ನು ಯುವತಿ ಸಹೋದರ ರೆಕಾರ್ಡ್ ಕೂಡ ಮಾಡಿದ್ದಾನೆ. ಆದರೆ ಇಷ್ಟು ದಿನ ಈ ವಿಚಾರ ತಿಳಿದಿದ್ದರೂ ಸುಮ್ಮನಿದ್ದು ಈಗ ಯುವತಿ ಪೋಷಕರು ಡಿಕೆ ಶಿವಕುಮಾರ್ ಅವರಿಂದ ಮಗಳನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಇಷ್ಟು ದಿನ ಯಾಕೆ ಯುವತಿ ಪೋಷಕರು ಸುಮ್ಮನ್ನಿದ್ದರು? ಎಂದು ಯುವತಿ ಪರ ವಕೀಲ ಜಗದೀಶ್ ಪ್ರಶ್ನೆ ಮಾಡಿದ್ದಾರೆ.

ಯುವತಿ ವಿಡಿಯೋದಲ್ಲಿ ತನ್ನ ಪೋಷಕರನ್ನು ರಮೇಶ್ ಜಾರಕಿಹೊಳಿಯಿಂದ ಕಾಪಾಡಿ ಎಂದು ಹೇಳಿದ್ದಳು. ಈ ವಿಡಿಯೋ ಬಿಡುಗಡೆ ಮಾಡುತ್ತಿದ್ದಂತೆ ಪೋಷಕರು , ಯುವತಿ ಮೇಲೆ ಒತ್ತಡದಿಂದ ಈ ರೀತಿ ಹೇಳುತ್ತಿದ್ದಾರೆ. ಹೀಗಾಗಿ ಈಗ ಆಕೆ ಹೇಳಿದ್ದು ಯಾವುದೂ ನಿಜವಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಯುವತಿ ತಂದೆ ಮಾಧ್ಯಮದ ಮುಂದೆ ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಯುವತಿ ಪರ ವಕೀಲ ಜಗದೀಶ್, ” ಡಿಕೆ ಶಿವಕುಮಾರ್ ತೊಂದರೆ ಕೊಡುತ್ತಿದ್ದರೆ. ಇಷ್ಟು ದಿನ ಇದೇ ಹೇಳಿಕೆ ಕೊಡಬಹುದಿತ್ತು. ಯುವತಿ ವಿಡಿಯೋ ಮಾಡಿದ ಕೂಡಲೇ ಇವರು ಯಾಕೆ ಮಾಧ್ಯಮದ ಮುಂದೆ ಬಂದು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ” ಎಂದು ಹರಿಹಾಯ್ದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights