‘ಡಿಕೆ ಶಿವಕುಮಾರ್ ಅವರಿಂದ ನನ್ನ ಮಗಳನ್ನು ಕಾಪಾಡಿ’- ಸಿಡಿ ಯುವತಿ ಪೋಷಕರಿಂದ ಮನವಿ!

‘ಡಿಕೆ ಶಿವಕುಮಾರ್ ಅವರಿಂದ ನನ್ನ ಮಗಳನ್ನು ಕಾಪಾಡಿ’ ಎಂದು ಸಿಡಿ ಯುವತಿ ಪೋಷಕರು ಮಾಧ್ಯಮದ ಮುಂದೆ ಮನವಿ ಮಾಡಿಕೊಂಡಿದ್ದಾರೆ. ಕುಟುಂಬಸ್ಥರ ಹೇಳಿಕೆ ಸರ್ಕಾರಕ್ಕೆ ಮುಟ್ಟಲಿ ಎಂದು ಮಾಧ್ಯಮದ ಮುಂದೆ ಬಂದು ಯುವತಿ ಪೊಷಕರು ಮನವಿ ಮಾಡಿಕೊಂಡಿದ್ದಾರೆ.

‘ಯಾರ ಒತ್ತಡಕ್ಕೆ ಮಣಿಯದಂತೆ, ಯಾರ ಬೆದರಿಕೆಗೆ ಹೆದರದಂತೆ ಹೊರಗೆ ಬಾ’ ಎಂದು ಮಾಧ್ಯಮದ ಮುಂದೆ ಯುವತಿಗೆ ಪೋಷಕರು ಮನವಿ ಮಾಡಿದ್ದಾರೆ. ‘ನಮಗೆ ಯಾವುದೇ ಒತ್ತಡ ಇಲ್ಲ. ನಮಗೆ ಪೊಲೀಸ್ ರಕ್ಷಣೆ ಇದೆ. ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ಯುವತಿ ತಾಯಿ ಯುವತಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ಯುವತಿ ಪೋಷಕರು ಯಾರದ್ದೋ ಒತ್ತಡಕ್ಕೆ ಸಿಲುಕಿದ್ದಾರೆ. ಯಾರ ಬೇಕಾದರು ಏನ್ ಬೇಕಾದರು ಮಾಡಲಿ. ನನಗೂ ಇದಕ್ಕೂ ಸಂಬಂಧವಿಲ್ಲ. ತನಿಖೆ ಮಾಡಲಿ, ಯಾವುದಾದರೂ ಸಾಕ್ಷಿ ಇದ್ದರೆ ಕೊಡಲಿ” ಎಂದು ಹೇಳಿದ್ದಾರೆ.

ಯುವತಿ ಅಜ್ಞಾತ ಸ್ಥಳದಿಂದ ನಾಲ್ಕನೇ ವಿಡಿಯೋ ಬಿಡುಗಡೆ ಮಾಡಿ “ನನ್ನ ತಂದೆ-ತಾಯಿಗೆ ರಕ್ಷಣೆ ಕೊಡಿ. ರಮೇಶ್ ಜಾರಕಿಹೊಳಿಯಿಂದ ತಂದೆ-ತಾಯಿಯನ್ನು ಕಾಪಾಡಿ” ಎಂದು ಮನವಿ ಮಾಡಿದ್ದಳು. ಇದಕ್ಕೆ ಪ್ರತಿಯುತ್ತರವಾಗಿ ಮಾಧ್ಯಮದ ಮುಂದೆ  ಬಂದ ಯುವತಿ ತಂದೆ-ತಾಯಿ” ನೀನು ಯಾರ ಒತ್ತಡ ಇಲ್ಲದೆ ಹೊರಗಡೆ ಬಾ. ನಾವಿದ್ದೇವೆ. ನಾವು ನಿನ್ನನ್ನು ನೋಡಿಕೊಳ್ಳುತ್ತೇವೆ.  ಯಾರ ಬೆದರಿಕೆಗೆ ಹೆದರದಂತೆ ಹೊರಗೆ ಬಾ. ನಮಗೆ ಯಾರ ಒತ್ತಡವೂ ಇಲ್ಲ’ ಎಂದು ಯುವತಿಗೆ ತಾಯಿ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಯುವತಿ ರಮೇಶ್ ಜಾರಕಿಹೊಳಿ ವಿರುದ್ಧ ಹರಿಹಾಯ್ದರೆ, ಇತ್ತ ಯುವತಿ ತಂದೆ-ತಾಯಿ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯುತ್ತಿದ್ದಾರೆ. ಈ ಪ್ರಕರಣ ಇನ್ನು ಯಾವ ಹಂತಕ್ಕೆ ಬಂದು ತಲುಪುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights