BJP ಬಗ್ಗೆ ಸ್ವತಃ ಬಿಜೆಪಿಗರೇ ಬಾಯ್ಬಿಟ್ಟ ಸತ್ಯಗಳಿವು: BJP ವಿರುದ್ದ ಕಾಂಗ್ರೆಸ್ ಅಪಹಾಸ್ಯ!
ಪ್ರಧಾನಿ ಮೋದಿ ಸೇರಿದಂತೆ, ಬಿಜೆಪಿಗರನ್ನು ಕಾಂಗ್ರೆಸ್ ಹಾಗೂ ಇತರ ಪ್ರಕ್ಷಗಳು ಮತ್ತು ನೆಟ್ಟಿಗರು ಭಾರೀ ಟ್ರೋಲ್ ಮಾಡುತ್ತಿದ್ದಾರೆ. ಇದೀಗ ರಾಜ್ಯ ಬಿಜೆಪಿ ವಿರುದ್ಧ ವಿವಿಧ ರೀತಿಯಲ್ಲಿ ವಾಗ್ದಾಳಿ ನಡೆಸುತ್ತಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿಗರು ಬಿಜೆಪಿಯ ಬಗ್ಗೆ ಬಾಯ್ಬಿಟ್ಟ ಸತ್ಯಗಳಿವು ಎಂದು ಕೆಲವು ವಿಷಯಗಳನ್ನು ಪಟ್ಟಿ ಮಾಡಿ ಟ್ವೀಟ್ ಮಾಡಿದೆ.
ಈ ಬಗ್ಗೆ ಮಾಡಿರುವ ಕರ್ನಾಟಕ ಕಾಂಗ್ರೆಸ್, “ಸಚಿವರಿಗೆ ಸ್ವತಂತ್ರವಿಲ್ಲ, ಶಾಸಕರಿಗೆ ಅನುದಾನವಿಲ್ಲ, ಖಜಾನೆಯಲ್ಲಿ ಹಣವಿಲ್ಲ, ಜನಹಿತದ ಯೋಜನೆ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ. ಬಜೆಟ್ನಲ್ಲಿ ಹುರುಳಿಲ್ಲ. ಜನರ ಸಂಕಷ್ಟಕ್ಕೆ ಕೊನೆಯಿಲ್ಲ. ಭ್ರಷ್ಟಾಚಾರಕ್ಕೆ ಮಿತಿ ಇಲ್ಲ. ಮುಖ್ಯಮಂತ್ರಿಗೆ ಮತಿ ಇಲ್ಲ. ಬಿಜೆಪಿಗೆ ಲಜ್ಜೆ ಇಲ್ಲ. ಸ್ವತಃ ಬಿಜೆಪಿಗರೇ ಬಾಯ್ಬಿಟ್ಟ ಸತ್ಯಗಳಿವು” ಎಂದು ಬಿಜೆಪಿಗರನ್ನು ಕಾಂಗ್ರೆಸ್ ಅಪಹಾಸ್ಯ ಮಾಡಿದೆ.
ಯಡಿಯೂರಪ್ಪ ಅವರು ಲಿಂಗಾಯತ ನಾಯಕರನ್ನು ಮುಗಿಸಿದರು, ಈಗ ಹಿಂದುಳಿದ ವರ್ಗದ ನಾಯಕರನ್ನು ಮುಗಿಸುವ ಕಾರ್ಯಕ್ರಮ ಹಾಕಿದ್ದಾರೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಹೇಳಿದ್ದಾರೆ. ಯಡಿಯೂರಪ್ಪ ಅವರೇ, ಯತ್ನಾಳ್ ಹೇಳಿದಂತೆ ಬಿ ಬಿ ಶಿವಪ್ಪನವರಿಂದ ಹಿಡಿದು ಇಂದಿನ ನಾಯಕರವರೆಗೂ ಎಲ್ಲರನ್ನೂ ಮುಗಿಸಿದಿರಿ ಅಲ್ಲವೇ? ನೀವು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದಿರುವುದು, ಅವರ ಆರೋಪ ಒಪ್ಪಿದಂತೆ ಎಂದಿದೆ.
▪️ಸಚಿವರಿಗೆ ಸ್ವತಂತ್ರವಿಲ್ಲ
▪️ಶಾಸಕರಿಗೆ ಅನುದಾನವಿಲ್ಲ
▪️ಖಜಾನೆಯಲ್ಲಿ ಹಣವಿಲ್ಲ
▪️ಜನಹಿತದ ಯೋಜನೆ ಇಲ್ಲ
▪️ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ
▪️ಬಜೆಟ್ನಲ್ಲಿ ಹುರುಳಿಲ್ಲ
▪️ಜನರ ಸಂಕಷ್ಟಕ್ಕೆ ಕೊನೆಯಿಲ್ಲ
▪️ಭ್ರಷ್ಟಾಚಾರಕ್ಕೆ ಮಿತಿ ಇಲ್ಲ
▪️ಮುಖ್ಯಮಂತ್ರಿಗೆ ಮತಿ ಇಲ್ಲ
▪️ಬಿಜೆಪಿಗೆ ಲಜ್ಜೆ ಇಲ್ಲಸ್ವತಃ ಬಿಜೆಪಿಗರೇ ಬಾಯ್ಬಿಟ್ಟ ಸತ್ಯಗಳಿವು!
— Karnataka Congress (@INCKarnataka) April 3, 2021
ಮತ್ತೊಂದು ಟ್ವಿಟ್ ನಲ್ಲಿ. ಸಚಿವರಿಗೆ ಸ್ವತಂತ್ರವಿಲ್ಲ. ಶಾಸಕರಿಗೆ ಅನುದಾನವಿಲ್ಲ. ಖಜಾನೆಯಲ್ಲಿ ಹಣವಿಲ್ಲ. ಜನಹಿತದ ಯೋಜನೆ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ. ಬಜೆಟ್ನಲ್ಲಿ ಹುರುಳಿಲ್ಲ. ಜನರ ಸಂಕಷ್ಟಕ್ಕೆ ಕೊನೆಯಿಲ್ಲ. ಭ್ರಷ್ಟಾಚಾರಕ್ಕೆ ಮಿತಿ ಇಲ್ಲ. ಮುಖ್ಯಮಂತ್ರಿಗೆ ಮತಿ ಇಲ್ಲ. ಬಿಜೆಪಿಗೆ ಲಜ್ಜೆ ಇಲ್ಲ. ಸ್ವತಃ ಬಿಜೆಪಿಗರೇ ಬಾಯ್ಬಿಟ್ಟ ಸತ್ಯಗಳಿವು ಎಂಬುದಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: ಬಂಗಾಳ ಚುನಾವಣೆ: ಹಿಂದೂ-ಮುಸ್ಲಿಮರನ್ನು ವಿಭಜಿಸಲು AIMIM, ISA ಪಕ್ಷಗಳು BJPಯಿಂದ ಹಣ ಪಡೆದಿವೆ: ಮಮತಾ ಬ್ಯಾನರ್ಜಿ