‘ಸಿಎಂ ಬದಲಾವಣೆ ಆಗಬೇಕು ಆಗೇ ಆಗುತ್ತಾರೆ’ ಬಸನಗೌಡ ಪಾಟೀಲ್ ಯತ್ನಾಳ್!

ತಣ್ಣಗಾಗಿದ್ದ ಸಿಎಂ ಬದಲಾವಣೆ ವಿಚಾರ ಮತ್ತೆ ಗದಿಗೆದರಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ. ಸಿಎಂ ಬದಲಾವಣೆ ಆಗಬೇಕು ಆಗೇ ಆಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುನರುಚ್ಚರಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ” ಸಿಎಂ ಬದಲಾವಣೆ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಸಿಎಂ ಯಡಿಯೂರಪ್ಪನವರಿಗೆ ಸಾಕಷ್ಟು ಕೆಲಸ ಮಾಡಲು ಆಗುತ್ತಿಲ್ಲ. ಒಂದು ದಿನಕ್ಕೆ ಒಂದು ಮೀಟಿಂಗ್ ಮಾತ್ರ ನಡೆಯುತ್ತಿದೆ. ಮತ್ತೊಂದು ಮೀಟಿಂಗ್ ಮಾಡಲು ಸಿಎಂ ಸುಸ್ತಾಗಿರುತ್ತಾರೆ. ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಮಡು ಸಿಎಂ ಬದಲಾಗಬೇಕು. ಅವರ ವಯೋವಿತಿಯನ್ನು ಹೈಕಮಾಂಡ್ ಪರಿಗಣಿಸಬೇಕು” ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಭ್ರಷ್ಟರ ಅಂತ್ಯವಾಗಬೇಕು ಅಂತ ಕೇಳಲು ಮೈಸೂರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದೇವೆ. ಅದೇ ರೀತಿ ಆಗುತ್ತದೆ ಎಂದು ಹೇಳಿದ್ದಾರೆ.

ಮಠಾಧೀಶರು ಯಾವ ಜನ ಪರ ಕೆಲಸ ಮಾಡುತ್ತಿದ್ದಾರೆಂದು ಸಿಎಂ ಪರವಾಗಿ ಮಾತನಾಡುತ್ತಾರೆ…? ಕರ್ನಾಟಕದಲ್ಲಿ ವಿರೋಧ ಪಕ್ಷ ನಾನೇ. ನನ್ನೊಂದಿಗೆ ಯೋಗೇಶ್ವರ್, ವಿಶ್ವನಾಥ್ ಇದಾರೆ. ಇನ್ನೂ ಹಲವಾರು ಶಾಸಕರೂ ಇದ್ದಾರೆ.  ಸಿಎಂ ಬದಲಾವಣೆ ಆದರೆ ಕರ್ನಾಟಕಕ್ಕೆ ಒಳ್ಳೆದು. ಸಿಎಂ ಬದಲಾವಣೆ ಆಗಬೇಕು ಆಗೇ ಆಗುತ್ತದೆ ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights