ಬಿಬಿಎಂಪಿಯಿಂದ ಮಹತ್ವದ ಕಾರ್ಯಚರಣೆ : ಬಕ್ರೀದ್ ಗೆ ಬಲಿ ಕೊಡಲು ತಂದಿದ್ದ 11 ಒಂಟೆಗಳ ರಕ್ಷಣೆ..!
ಬಕ್ರೀದ್ ಗೆ ಬಲಿ ಕೊಡಲು ತಂದಿದ್ದ 11 ಒಂಟೆಗಳನ್ನು ಬಿಬಿಎಂಪಿ ರಕ್ಷಣಾ ತಂಡ ರಕ್ಷಣೆ ಮಾಡಿದೆ.
ಬೆಂಗಳೂರಿನ ಮಹದೇವಪುರ ಗೋ ಶಾಲೆಯ ಮೇಲೆ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸಿದ್ದು ಬಕ್ರೀದ್ ಗೆ ಬಲಿ ಕೊಡಲು ತಂದಿದ್ದ 11 ಒಂಟೆಗಳನ್ನು ರಕ್ಷಣೆ ಮಾಡಿದೆ. ನಾಳೆ ಬಕ್ರೀದ್ ಆಚರಣೆಯ ಪ್ರಯುಕ್ತ ಈ ಒಂಟೆಗಳನ್ನು ರಾಜಸ್ಥಾನ್ ನಿಂದ ತರಿಸಲಿಕೊಳ್ಳಲಾಗಿತ್ತು. ಈ ಬಗ್ಗೆ ಗುಪ್ತವಾಗಿ ಮಾಹಿತಿ ಪಡೆದಿದ್ದ ಬಿಬಿಎಂಪಿ ಅಧಿಕಾರಿಗಳಿ ಗೋಶಾಲೆ ಮೇಲೆ ದಾಳಿ ಮಾಡಿದ್ದಾರೆ.
ಹೊರ ರಾಜ್ಯದಿಂದ ಒಂಟೆಗಳನ್ನು ಕಳ್ಳ ಸಾಗಾಣೆ ಮಾಡಿರುವ ಅನುಮಾನ ಇದೆ. ನಗರದ ವಿವಿಧ ಭಾಗಗಳಲ್ಲಿ ಇನ್ನೂ ಒಂಟೆಗಳನ್ನು ಅಡಗಿಸಿಡಲಾಗಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಇದರಿಂದ ಒಂಟೆಗಳ ಹುಡುಕಾಟದಲ್ಲಿ ಅಧಿಕಾರಿಗಳು ತಲ್ಲೀನರಾಗಿದ್ದಾರೆ.