‘ನಿರಾಣಿ ಒಬ್ಬ ಸಿಡಿ ಬಾಬಾ, ಅವರ ಬಳಿ 500 ಸಿಡಿಗಳಿವೆ’ – ಉದ್ಯಮಿ ಆಲಂ ಪಾಷಾ ಗಂಭೀರ ಆರೋಪ!
‘ಮುರುಗೇಶ್ ನಿರಾಣಿ ಒಬ್ಬ ಸಿಡಿ ಬಾಬಾ, ಅವರ ಬಳಿ ಸುಮಾರು 500-1000 ಸಿಡಿಗಳಿವೆ’ ಎಂದು ಉದ್ಯಮಿ ಆಲಂ ಪಾಷಾ ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ರೇಸ್ ನಲ್ಲಿರುವ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಯಾವುದೇ ಸಾಕ್ಷಾಧಾರಗಳಿಲ್ಲದೆ ಉದ್ಯಮಿ ಆಲಂ ಪಾಷಾ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಲಂ ಪಾಷಾ, “ಮುರುಗೇಶ್ ನಿರಾಣಿ ಒಬ್ಬ ಸಿಡಿ ಬಾಬಾ, ಅವರ ಬಳಿ ಸುಮಾರು 500-1000 ಸಿಡಿಗಳಿವೆ. ಭವಿಷ್ಯದಲ್ಲಿ ಅವರು ಸಿಡಿ ಮಾಡುತ್ತಾರೆ. 50 ಲಕ್ಷ ಸಿಡಿ ರೆಡಿ ಮಾಡೋರು ಅವರ ಬಳಿ ಇದ್ದಾರೆ” ಎಂದಿದ್ದಾರೆ.
ಹಿಂದಿನಿಂದಲೂ ಮುರುಗೇಶ್ ನಿರಾಣಿ ಹಾಗೂ ಆಲಂ ಪಾಷಾ ನಡುವ ಜಟಾಪಟಿ ಇದೆ. ಈ ಹಿಂದೆ ಸಚಿವ ಸ್ಥಾನಕ್ಕೆ ನಿರಾಣಿ ಹೋಗುವಾಗ ಪಾಷಾ ಆರೋಪ ಮಾಡಿದ್ರು. ಸದ್ಯ ಸಿಎಂ ಸ್ಥಾನದಲ್ಲಿ ನಿರಾಣಿ ಹೆಸರು ಕೇಳಿ ಬಂದ ಬೆನ್ನಲ್ಲೇ ಆಲಂ ಪಾಷಾ ಈ ಆರೋಪ ಮಾಡಿದ್ದಾರೆ.
ಈ ಹಿಂದೆ ಸಚಿವ ಮುರುಗೇಶ್ ನಿರಾಣಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಉದ್ಯಮಿ ಆಲಂ ಪಾಷಾ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು.