ಫ್ಯಾಕ್ಟ್ಚೆಕ್: ನಕಲಿ ರುದ್ರಾಕ್ಷಿ ಮಣಿಯ ಬಗ್ಗೆ ಇರಲಿ ಎಚ್ಚರ
ತ್ರಿಶೂಲ್ ಮತ್ತು ಶಂಖದ ಆಕಾರವನ್ನು ಹೊಂದಿರುವ ರುದ್ರಾಕ್ಷಿಯ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸ್ವಾಭಾವಿಕವಾಗಿ ರೂಪುಗೊಂಡ ಬಹು ಅಪರೂಪದ ರುದ್ರಾಕ್ಷಿ ಮಣಿ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
“ತ್ರಿಶೂಲ ಮತ್ತು ಶಂಖ ಚಿಹ್ನೆಗಳನ್ನು ಹೊಂದಿರುವ ಅಪರೂಪದ ನೈಸರ್ಗಿಕ ರುದ್ರಾಕ್ಷಿಯ ಚಿತ್ರವನ್ನು ಪರಿಶೀಲಿಸುವಂತೆ ಏನ್ಸುದ್ದಿ.ಕಾಂಗೆ ಹಲವು ವಿನಂತಿಗಳು ಬಂದಿವೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ಚಿತ್ರವು ಅದೇ ಪ್ರತಿಪಾದನೆಯೊಂದಿಗೆ ಬಹಳ ಸಮಯದಿಂದ ವೈರಲ್ ಆಗುತ್ತಿರುವುದು ಕಂಡುಬಂದಿದೆ. 2018 ರಲ್ಲಿ ಬಾಲಿವುಡ್ ನಟಿ ಇಶಾ ಡಿಯೋಲ್ ಈ ಪೋಸ್ಟ್ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡಾಗ, ಇದು ನಕಲಿ ಎಂದು ಹಲವಾರು ಜನರು ಕಾಮೆಂಟ್ ಮಾಡಿದ್ದಾರೆ ಮತ್ತು ಅಂತಹ ರುದ್ರಾಕ್ಷಿಗಳು ಋಷಿಕೇಶದಲ್ಲಿ ಹೇರಳವಾಗಿ ಲಭ್ಯವಿದೆ. ಇದಲ್ಲದೆ, ಸಿಪಿಐ(ಎಂ) ಪುದುಚೇರಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಬಳಕೆದಾರರಿಗೆ ಇವು ನಕಲಿ ಮತ್ತು ಅವುಗಳನ್ನು ತಪ್ಪಿಸಬೇಕು ಎಂದು ಎಚ್ಚರಿಸಿದೆ.
Divine Rudraksha is very rare to be seen. Please see the miracle in the nature’s creation. Zoom it out. You will see a Trishul and a Shankh. pic.twitter.com/lIOTikYvFY
— Esha Deol (@Esha_Deol) December 22, 2016
ದಿ ವೈರ್ ಸುದ್ದಿ ಪೋರ್ಟಲ್ ಪ್ರಕಾರ, ರುದ್ರಾಕ್ಷಿಯು ಎಲೆಯೊಕಾರ್ಪಸ್ ಗ್ಯಾನಿಟ್ರಸ್ ಮರದ ಒಣಗಿದ ಬೀಜಗಳಾಗಿವೆ. ಅಲ್ಲದೆ, ರುದ್ರಾಲೈಫ್ ಸೀತಾ ಸಂಸ್ಥಾಪಕ ಡಾ. ತನಯ್ ಅವರು ಸರಣಿಯ ವೀಡಿಯೊಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ನಕಲಿ ರುದ್ರಾಕ್ಷಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ನಕಲಿ ರುದ್ರಾಕ್ಷಗಳನ್ನು ಪ್ಲಾಸ್ಟಿಕ್, ಸೀಸ, ಮರ ಹೀಗೆ ನಾನಾ ವಸ್ತುಗಳನ್ನು ಬಳಸಿ ತಯಾರಿಸಿ ಅದರ ಮೇಲೆ ಬೇಕಾದ ಆಕಾರಗಳನ್ನು ಕೆತ್ತಲಾಗಿದೆ ಎಂದು ವರದಿ ಮಾಡಿದೆ.
ದೇವರು, ಧರ್ಮಗಳ ಬಗ್ಗೆ ಹಲವರಿಗೆ ಅವರದ್ದೆ ಆದ ಶ್ರದ್ದೆ ಮತ್ತು ನಂಬಿಕೆಗಳು ಇರುತ್ತವೆ. ಭಕ್ತರ ನಂಬಿಕೆಗಳನ್ನೆ ಬಂಡವಾಳ ಮಾಡಿಕೊಡು ದೇವರು ಧರ್ಮದ ಹೆಸರಿನಲ್ಲಿ ಹೀಗೆ ಮೋಸ ಮಾಡುವುದು ಎಷ್ಟು ಸರಿ. ಇದರಿಂದ ಅವರ ಭಾವನೆಗಳಿಗೆ ಧಕ್ಕೆ ಉಂಟಾಗುವುದಿಲ್ಲವೆ? ಕೇವಲ ಲಾಭವನ್ನೆ ಆದ್ಯತೆಯಾಗಿ ಇರಿಸಿ ಇಂತಹ ವಂಚನೆ ಮಾಡುವವರ ಬಗ್ಗೆ ಎಚ್ಚರವಿರಲಿ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ನಕಲಿ ಮತ್ತು ಮಾನವ ನಿರ್ಮಿತ ರುದ್ರಾಕ್ಷಿಯಾಗಿದ್ದು, ಮರ, ಸೀಸ, ಪ್ಲಾಸ್ಟಿಕ್, ಅಂಟು ಮುಂತಾದ ವಸ್ತುಗಳನ್ನು ಬಳಸಿ ರಚಿಸಬಹುದಾಗಿದೆ. ಅವುಗಳ ಮೇಲೆ ಅಚ್ಚುಗಳನ್ನು ಬಳಸಿ ಚಿಹ್ನೆಗಳನ್ನು ಕೆತ್ತಲಾಗಿದೆ. ಈ ರೀತಿಯ ನಕಲಿ ರುದ್ರಾಕ್ಷಿಗಳನ್ನು ಭಕ್ತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇಂತಹ ನಕಲಿಗಳ ಬಗ್ಗೆ ಎಚ್ಚರವಿರುವಂತೆ ಹಲವು ಕಂಪನಿಗಳು ಜನರನ್ನು ಎಚ್ಚರಿಸುತ್ತವೆ. ಆದ್ದರಿಂದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹಿಂಗಾಗಿದ್ದಾರಾ?