ಇವರು ಚಿತ್ರನಟ- ನಟಿಯರ ಹುಚ್ಚು ಅಭಿಮಾನಿಯಲ್ಲ, ಮಾಜಿ ಸಿಎಂರ ಫ್ಯಾನ್

ಹುಚ್ಚು ಅಭಿಮಾನಿಗಳು ಸಾಮಾನ್ಯವಾಗಿ ಚಿತ್ರನಟ- ನಟಿಯರಿಗೆ ಇರುವುದು ಸ್ವಾಭಾವಿಕ, ಆದರೆ ಮಾಜಿ ಸಿಎಂ ಗೆ ಅಭಿಮಾನಿಗಳು ಇದ್ದಾರೆ ಅಂದರೆ ನೀವು ನಂಬಲೇಬೇಕು..

ಅವರು ಅಭಿಮಾನಕ್ಕಾಗಿ ಕಂಬಳಿ, ಕುರಿ, ಗಧೆ, ಸುಂದರ ಕಲಾಕೃತಿಗಳು, ದುಬಾರಿ ವಾಚ್ ನೀಡಿದ್ದನ್ನು ನೋಡಿದ್ದೇವೆ. ಇಲ್ಲೊಬ್ಬ ಅವರ ಅಭಿಮಾನಿ ಈ ಎಲ್ಲಕ್ಕಿಂತ ವಿಭಿನ್ನವಾಗಿ ಚಿಂತಿಸಿ ತನ್ನ ರಕ್ತದಲ್ಲಿ ಸಿದ್ದರಾಮಯ್ಯ ನವರ ಸುಂದರವಾದ ಭಾವಚಿತ್ರವನ್ನು ಬಿಡಿಸಿ ಅವರಿಗೆ ಕಾಣಿಕೆಯಾಗಿ ನೀಡಿದ್ದಾನೆ.

ಯರಮರಸ್ ದಂಡು ಗ್ರಾಮದ ಅಮಾನ ಎಂ ಡಿ ಎಂಬ ಯುವಕ ಸಿದ್ದರಾಮಯ್ಯ ನವರ ಕಟ್ಟಾಭಿಮಾನಿಯಾಗಿದ್ದು, ಇತ್ತೀಚಿಗೆ ರಾಯಚೂರು ಜಿಲ್ಲೆಯ ಪ್ರವಾಸದಲ್ಲಿರುವ ಸಿದ್ದರಾಮಯ್ಯ ನವರಿಗೆ ಏನಾದರು ಕಾಣಿಕೆ ನೀಡಬೇಕೆಂದು ಯೋಚಿಸಿ ತನ್ನ ಮೈಯಲ್ಲಿಯ ೩೦೦ ಎಂ ಎಲ್ ರಕ್ತವನ್ನು ತೆಗೆಸಿ ಸ್ನೇಹಿತರಾಗಿರುವ ಸೋ‌ಮಶೇಖರ ಎಂಬುವವರಿಂದ ಭಾವಚಿತ್ರವನ್ನು ಬರೆಸಿ ಅದಕ್ಕೆ ಫ್ರೆಮ್ ಹಾಕಿಸು ಕಾಣಿಕೆ ನೀಡಿದ್ದಾನೆ. ಇದನ್ನು ಸಿದ್ದರಾಮಯ್ಯ ನವರಿಗೆ ನೀಡಿ ಸಿದ್ದರಾಮಯ್ಯ ಸಂತೋಷ ಪಟ್ಟರು ಎಂದು ಅಭಿಮಾನಿ ಹೇಳುತ್ತಿದ್ದಾನೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights