ಐತಿಹಾಸಿಕ ಸ್ಥಳ ವೀಕ್ಷಣೆಗೆಂದು ಹೋದ ನಟಿ ಅಲ್ಲೇ ಲಾಕ್ ಆದ್ರೂ…
ದೇಶದಲ್ಲಿ ಲಾಕ್ ಡೌನ್ ನಿಂದಾಗಿ ಅದೆಷ್ಟೋ ಜನ ತಮ್ಮ ಊರುಗಳಿಗೇ ಹೋಗದೇ ಇದ್ದ ಜಾಗದಲ್ಲೇ ನೆಲೆಸುವಂತಾಹ ಸ್ಥಿತಿ ನಿರ್ಮಾಣವಾಗಿದ್ದು, ಕನ್ನಡದ ಖ್ಯಾತ ನಟಿ ಜಯಂತಿ ಕೂಡ ಐತಿಹಾಸಿಕ ಸ್ಥಳ ಬಳ್ಳಾರಿಯಲ್ಲಿ ನೆಲೆಸುವಂತಾಗಿದೆ.
ಹೌದು… ಕಳೆದ ತಿಂಗಳು ಐತಿಹಾಸಿಕ ಸ್ಥಳ ಹಂಪಿ ವೀಕ್ಷಣೆಗೆಂದು ಕುಟುಂಬ ಸಮೇತರಾಗಿ ತೆರಳಿದ್ದ ನಟಿ ಜಯಂತಿ ಅವರು ಲಾಕ್ ಡೌನ್ ನಿಂದಾಗಿ ಬಳ್ಳಾರಿಯಲ್ಲೇ ಉಳಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಮಾರ್ಚ್ 22 ರಂದು ನಟಿ ಜಯಂತಿ ಹಾಗೂ ಕುಟುಬಂಸ್ಥರು ಹಂಪಿಗೆ ತೆರಳಿದ್ದರು. ಈ ನಡುವೆ ಲಾಕ್ ಡೌನ್ ಘೋಷಣೆಯಾದ ಬೆನ್ನೆಲೆಯಲ್ಲಿ ಮಾರ್ಚ್ 30ರವೆರೆಗೂ ಬಳ್ಳಾರಿಯ ಖಾಸಗೀ ಹೋಟೆಲ್ ನಲ್ಲಿ ವಾಸ್ಥವ್ಯ ಹೂಡಬೇಕಾಗಿ ಬಂತು. ಆದರೆ ಸದ್ಯ ಲಾಕ್ ಡೌನ್ ಮೇ 3ರರವರೆಗೂ ಕಂಟಿನ್ಯೂ ಆಗಿದ್ದು ಅನಿವಾರ್ಯವಾಗಿ ಜಯಂತಿ ಹಾಗು ಅವರ ಕುಟುಂಬಸ್ಥರು ಬಳ್ಳಾರಿ ಯಲ್ಲೇ ಇರಬೇಕಾಗಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಕಡಿವಾಣವೆಂದರೆ ಲಾಕ್ ಡೌನ್. ಹೀಗಾಗಿ ಲಾಕ್ ಡೌನ್ ಮುಂದುವರೆಸುವ ನಿರ್ಧಾರಕ್ಕೆ ಮೋದಿ ಇಂದು ಬಂದಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಮಡಿದ್ದಾರೆ. ಕೊರೊನಾ ತಡೆಗೆ ಸಾಮಾಜಿಕ ಅಂತರ ಹಾಗೂ ಲಾಕ್ ಡೌನ್ ಅನಿವಾರ್ಯವಾಗಿದ್ದು ಮೋದಿ ಮೇ 3ರರವೆರೆಗೆ ಲಾಕ್ ಡೌನ್ ಮುಂದುವರೆಸಿದ್ದು, ಸ್ಯಾಂಡಲ್ ವುಡ್ ನಟಿ ಜಯಂತಿಯವರಿಗೆ ಬಳ್ಳಾರಿಯಲ್ಲಿರುವುದು ಅನಿವಾರ್ಯವಾಗಿದೆ.