ದಂತಕ್ಕಾಗಿ ಆನೆಯನ್ನೇ ಕೊಂದರು : ಕಳೇಬರ ಮಣ್ಣಿನಲ್ಲಿ ಹೂತಿಟ್ಟರು – ಯಾರವರು..?

ದಂತಕ್ಕಾಗಿ ಆನೆಯನ್ನೇ ಕೊಂದು ಕಳೇಬರ ಮಣ್ಣಿನಲ್ಲಿ ಹೂತಿಟ್ಟ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕಾಡುಮನೆ ಎಸ್ಟೇಟ್ ನಲ್ಲಿ ನಡೆದಿದೆ.

ಅಷ್ಟಕ್ಕೂ ಇಂಥಹ ಪಾಪದ ಕೆಲಸ ಮಾಡಿದವರು ನಮ್ಮ ಕರ್ನಾಟಕದವರಲ್ಲ ಬದಲಿಗೆ ಅಸ್ಸಾಂಮಿಗರು. ದಂತವನ್ನ ಅಸ್ಸಾಂಗೆ ಕೊಂಡೊಯ್ಯಲು ಯತ್ನಿಸಿದ್ದ ವೇಳೆ ಸಿಕ್ಕಿಬಿದ್ದ ದಂತಚೋರರನ್ನು ಬಾಯಿ ಬಿಡಿಸಿದಾಗ ಈ ಸತ್ಯ ಹೊರಬಿದ್ದಿದೆ.

ಕಾಡಾನೆ ಕೊಂದು ದಂತ ಕಿತ್ತುಕೊಂಡು ಮಣ್ಣಿನಲ್ಲಿ ಕಳೇಬರ ಹೂತಿಟ್ಟ ಮೂವರು ದಂತಚೋರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಸಕಲೇಶಪುರ ಆರ್ ಎಫ್ ಓ ರವೀಂದ್ರ ನೇತೃತ್ವದಲ್ಲಿ ಅಸ್ಸಾಂ ಮೂಲದ ಗುರುಪ್ರಸಾದ್, ಸಿಲಾಸ್ ಬರ್ಲ್ ಮತ್ತು ಉಣಿಲ್ ಎಂಬ ಮೂವರ ಬಂಧನವಾಗಿದೆ.

ಕಾಡುಮನೆ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು ಕಾರ್ಮಿಕರು ಸುಮಾರು 35 ವರ್ಷ ಪ್ರಾಯದ ಕಾಡಾನೆಯನ್ನ ಕೊಂದಿ ದಂತ ಮಾರಾಟ ಮಾಡಲು ಯತ್ನಿಸಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights