ವಿಜಯಪುರ ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿರುವ ದೇವದಾಸಿ ಪದ್ಧತಿ..!
ವಿಜಯಪುರ ಜಿಲ್ಲೆಯಲ್ಲಿ ಇನ್ನೂ ದೇವದಾಸಿ ಪದ್ಧತಿ ಜೀವಂತವಾಗಿರುವುದು ತಿಳಿದು ಬಂದಿದೆ.
ಕುಟುಂಬವೊಂದು ಬಾಲಕಿಗೆ ಮುತ್ತು ಕಟ್ಟಿ ದೇವದಾಸಿ ಮಾಡಲು ಹೊರಟ ಘಟನೆ ವಿಜಯಪುರ ತಾಲೂಕಿನ ದೇವದಾಸಿ ದೇವಸ್ಥಾನವಿರುವ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮುತ್ತು ಕಟ್ಟುವ ಅನಿಷ್ಟ ಪದ್ದತಿ ಬೆಳಕಿಗೆ ಬಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲಕಿಯನ್ನು ರಕ್ಷಣೆ ಮಾಡಿದೆ.
5 ವರ್ಷದವಳಿದ್ದಾಗ ಮುತ್ತು ಕಟ್ಟಿದ್ದ ಕುಟುಂಬಸ್ಥರು, ಹದಿಹರಿಯದ ವಯಸ್ಸಿಗೆ ಬಂದಾಗ ದೇವದಾಸಿಯನ್ನಾಗಿ ಮಾಡಲು ನಡೆಸಿದ ಯತ್ನ ವಿಫಲವಾಗಿದೆ.
ಬಾಲಕಿ ರಕ್ಷಣೆ ಮಾಡಿದ ಅಧಿಕಾರಿಗಳು ಬಾಲಕಿಯರ ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ. ಮಕ್ಕಳ ರಕ್ಷಣಾ ಘಟಕದ ನಿರ್ಮಲಾ ಸುರಪುರ ಹಾಗೂ ಸಿಬ್ಬಂದಿ ಕಳೆದ ಒಂದು ವಾರದ ಹಿಂದೆ ಬಾಲಕಿಯನ್ನ ರಕ್ಷಣೆ ಮಾಡಿದೆ.