ಕನ್ನಡ ರಾಜ್ಯೋತ್ಸವ: ಕನ್ನಡಿಗರಿಗೆ RCBಯಿಂದ ಶುಭಾಷಯದ ಗಿಫ್ಟ್‌!

ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮದ ಮೆರಗು ರಂಗೇರಿದ್ದು, ಎಲ್ಲೆಡೆ ಕನ್ನಡದ ಹಾಡುಗಳು, ಸಂಸ್ಕೃತಿ, ಆಚರಣೆಗಳ ಮೂಲಕ ಕನ್ನಡ ಜಾತ್ರೆ ಆಂಭವಾಗಿದೆ. ಕನ್ನಡದ ಹಬ್ಬ ಆಚರಿಸುತ್ತಿರುವ ಕನ್ನಡಿಗರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡದಲ್ಲೇ ಕನ್ನಡಿಗರಿಗೆ ಶುಭ ಕೋರಿದ್ದು, ಕನ್ನಡಿಗರ ಹರ್ಷವನ್ನು ಮತ್ತಷ್ಟು ಹೆಚ್ಚಿಸಿದೆ.

ಆರ್ ಸಿಬಿಯ ನಾಯಕ ವಿರಾಟ್ ಕೊಹ್ಲಿ, ಸೇರಿದಂತೆ ರಾಜ್ಯದ ಪ್ರತಿಭೆ ದೇವದತ್ ಪಡಿಕ್ಕಲ್, ಎಬಿಡಿ ವಿಲಿಯರ್ಸ್, ಡೆಲ್ ಸ್ಟೇಯ್ನ್, ಶಾಬಾಜ್ ಅಹ್ಮದ್, ಉಮೇಶ್ ಯಾದವ್, ಶಿವಂ ದುಬೆ, ಯಜುವೇಂದ್ರ ಚಹಲ್, ಮಹಮದ್ ಸಿರಾಜ್, ಪವನ್ ದೇಶಪಾಂಡೆ ಶುಭ ಕೋರಿದ್ದಾರೆ. ಆ ಮೂಲಕ ಆರ್ ಸಿಬಿ ಕನ್ನಡ ಭಾಷೆಯಲ್ಲೇ ಶುಭಕೋರುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ಈ ವಿಶೇಷ ವಿಡಿಯೋವನ್ನು ಆರ್​ಸಿಬಿ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾವಿರಾರು ಮಂದಿ ಕನ್ನಡಿಗರು ಮತ್ತು ಆರ್ ಸಿಬಿ ಅಭಿಮಾನಿಗಳು ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ. ಕನ್ನಡಿಗರ ಮನಗೆದ್ದ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

https://twitter.com/RCBTweets/status/1322712612992282628?s=20

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights