ಭಾರತ್ ಬಂದ್: ರೈತರಿಗೆ ಅಣ್ಣಾ ಹಜಾರೆ ಬೆಂಬಲ; ಒಂದು ದಿನ ಉಪವಾಸ ಸತ್ಯಾಗ್ರಹ!
ಕೇಂದ್ರ ಸರ್ಕಾರ ಹೊಸ ಕೃಷಿ ಕಾನೂನುಗಳ ವಿರುದ್ದ ರೈತರು ಕರೆ ಕೊಟ್ಟಿರುವ ಭಾರತ್ ಬಂದ್ಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬೆಂಬಲ ಸೂಚಿಸಿದ್ದಾರೆ. ರೈತ ಪ್ರತಿಭಟನೆಯನ್ನು ಬೆಂಬಲಿಸಿ ಇಂದು ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಮಾಡುವುದಾಗಿ ತಿಳಿಸಿದ್ದಾರೆ.
ರೈತರ ಉಪಯೋಗವಾಗುವಂತಹ, ಅವರ ಹಿತಾಸಕ್ತಿಯನ್ನು ಕಾಪಾಡುವಂತಹ ಕಾಯ್ದೆಗಳನ್ನು ಸರ್ಕಾರ ಜಾರಿಗೆ ತರಬೇಕು. ಕೃಷಿಕರ ಹಿತಕ್ಕಾಗಿ ಸರ್ಕಾರ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ರೈತರ ಆಂದೋಲನ ದೇಶಾದ್ಯಂತ ನಡೆಯಬೇಕು ಎಂದು ಹೇಳಿರುವ ಅಣ್ಣಾ ಹಜಾರೆ, ಮಹಾರಾಷ್ಟ್ರದ ಅಹಮದ್ನಗರ್ ಜಿಲ್ಲೆಯ ರಾಳೆಗಾಂವ್ ಸಿದ್ದಿ ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ದೇಶದಲ್ಲಿ ರೈತರಿದ್ದರೆ ಮಾತ್ರ ದೇಶ ಉಳಿಯಲು ಸಾಧ್ಯ. ರೈತರು ಹೋರಾಟದ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಅದಕ್ಕೆ ಇದು ಸರಿಯಾದ ಸಮಯ. ರೈತರಿಗೆ ನನ್ನ ಬೆಂಬಲಿವಿದೆ. ಅವರ ಹೋರಾಟದಲ್ಲಿ ನಾನು ಮುಂದುವರೆಯುತ್ತೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿನಿಮಾ ಸ್ಟಾರ್ಗಳಿಗೆ ಚುನಾವಣೆ ಮೇಲಷ್ಟೇ ಪ್ರೀತಿ; ರೈತರ ಮೇಲಿಲ್ಲ: ನಟ ಚೇತನ್