ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಸಚಿವ ಮಾಧುಸ್ವಾಮಿ : ವೀಡಿಯೋ ವೈರಲ್!
ಇತ್ತೀಚೆಗೆ ಸಚಿವ ಮಾಧುಸ್ವಾಮಿ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ರೈತ ಮಹಿಳೆ ಮತ್ತು ಪ್ರತಿಭಟನಾಕಾರರ ಬಳಿಕ ಕೆಡಿಪಿ ಅಧಿಕಾರಿಗಳಿಗೆ ನಾಲಿಗೆ ಹರಿಬಿಟ್ಟು ಮಾತನಾಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಹೌದು… ಇಂದು ತುಮಕೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ “ನಿನ್ ಹೆಂಡ್ತಿ ಸೀರೆಯನ್ನ ಯಾವ ಸೋಪಲ್ಲಿ ತೊಳೆಯುತ್ತೀಯಾ..? ಈ ನನ್ಮಕ್ಕಳನ್ನ ಎಲ್ಲರನ್ನೂ ಸಸ್ಪೆಂಡ್ ಮಾಡ್ರೀ” ಎಂದು ಸಚಿವ ಮಾಧುಸ್ವಾಮಿ ಅಧಿಕಾರಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಸಭೆಯಲ್ಲಿ ಜಡ್ಪಿ ಇಂಜನಿಯರಿಂಗ್ ವಿಭಾಗದಲ್ಲಿ ಮಾಡಬೇಕಾಗಿದ್ದ ಕೆಲಸಗಳು ಸರಿಯಾಗಿ ಆಗದ್ದಕ್ಕೆ ಮಾಧುಸ್ವಾಮಿ ಎಇಇ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಾಡಿಸಿ ಒದ್ದರೆ ಎಲ್ಲಿಗೋಗಿ ಬಿದ್ದಿರ್ತಿಯ ಗೊತ್ತಾ.. ರಾಸ್ಕಲ್. ಜಡ್ಪಿ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸಗಳು ನಡೆದೇ ಇಲ್ಲ.ಕಳೆದ 4 ರಂದೇ ನಾನು ಸೂಚನೆ ನೀಡಿದ್ದೆ ಆದ್ರೂ ಯಾಕೆ ನೀವು ಕಂಟ್ರಾಕ್ಟರ್ ನ ಕರೆಸಿ ಕೆಲಸ ಒಪ್ಪಿಸಲಿಲ್ಲ.ಜಾಡ್ಸಿ ಒದ್ದರೆ ಎಲ್ಲಿಗೋಗ್ತಿಯ ಗೊತ್ತಾ ನೀನು ಎಂದು ಗರಂ ಆದರು.
ಈ ವೇಳೆ ರಂಗಸ್ವಾಮಿ ನನ್ನಿಂದ ತಪ್ಪಾಗಿದೆ ಎಂದು ಹೇಳಿದ್ರು.ಈ ಉತ್ತರ ಕೇಳಿ ಕೆಂಡಮಂಡಲವಾದ ಮಾಧುಸ್ವಾಮಿ, ಯಾವ ತಪ್ಪಾಗಿದೆ..? ರಾಸ್ಕಲ್ ಕತ್ತೆ ಕಾಯೋಕ್ ಬಂದಿದ್ದಿಯ ಇಲ್ಲಿಗೆ.
ನಿನ್ ಹೆಂಡ್ತಿ ಸೀರೆಯನ್ನ ಯಾವ ಸೋಪಲ್ಲಿ ತೊಳೆಯುತ್ತೀಯ. ಈ ನನ್ಮಕ್ಕಳನ್ನ ಎಲ್ಲರನ್ನೂ ಸಸ್ಪೆಂಡ್ ಮಾಡ್ರೀ ಎಂದು ಗರಂ ಆದರು.ಇನ್ನು ಈಸಭೆಯಲ್ಲಿ ಸಂಸದ ಬಸವರಾಜ್, ಜಿಪಂ ಅಧ್ಯಕ್ಷೇ ಲತಾರವಿಕುಮಾರ್, ಡಿಸಿ ಡಾ.ರಾಕೇಶ್ ಕುಮಾರ್, ಜಿಪಂ ಸಿಇಓ ಶುಭಕಲ್ಯಾಣ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಅವರ ವಿರುದ್ದ ಟೀಕೆಗಳ ಮಹಾಪುರವೇ ಹರಿದು ಬಂದರು ಸಚಿವರ ನಾಲಿಗೆ ಮಾತ್ರ ಹರಿಹಾಯುವುದನ್ನು ಬಿಡುತ್ತಿಲ್ಲ… ಇದಕ್ಕೆ ಕೊವೆಹಾಡಬೇಕಿದೆ..