ಇನ್ನು ಎರಡೂವರೆ ವರ್ಷ ಯಡಿಯೂರಪ್ಪನವರೇ ಸಿಎಂ: ಅಮಿತ್‌ ಶಾ

ಸರ್ಕಾರದ ಅವಧಿ ಪೂರ್ತಿ ಯಡಿಯೂರಪ್ಪನವರೇ ಸಿಎಂ ಎಂದು ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದು, ಮುಂಬರುವ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ನಾಯಕತ್ವದಲ್ಲಿ ಯಾವುದೇ ಗೊಂದಲವಿಲ್ಲ. ನೀವೇ ಸರ್ಕಾರದ ನಾಯಕತ್ವವನ್ನು ಮುಂದುವರೆಸಲಿದ್ದೀರಿ. ಕರ್ನಾಟಕದ ಬಿಜೆಪಿ ನಿಮ್ಮದೇ ನಾಯಕತ್ವದಲ್ಲಿ ಸದೃಢಗೊಳ್ಳಲಿದೆ ಎಂದು ಯಡಿಯೂಪ್ಪನವರಿಗೆ ಅಮಿತ್‌ ಶಾ ಹೇಳಿದ್ದಾರೆ ಎನ್ನಲಾಗಿದೆ.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆಗಳಲ್ಲೂ ಬಿಜೆಪಿ ಜಯಗಳಿಸಲು ಸಜ್ಜಾಗಬೇಕು. ವಿಧಾನಸಭೆ ಚುನಾವಣೆ ದೃಷ್ಟಿಯಿಂದಲೂ ಪಕ್ಷದ ಸಂಘಟನೆ ಕಟ್ಟಬೇಕು ಎಂದು ಅಮಿತ್‌ ಶಾ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಮುಂದುವರಿಯಲು ಹೈಕಮಾಂಡ್‌ನಿಂದ ಪೂರ್ಣ ಸಹಕಾರವಿದೆ. ಇದೇ ವಿಶ್ವಾಸ ಉಳಿಸಿಕೊಂಡು ಉತ್ತಮ ಆಡಳಿತ ನೀಡಬೇಕು. ಪಕ್ಷದ ಭವಿಷ್ಯವನ್ನು ಭದ್ರಪಡಿಸಬೇಕು. ಕೆಲ ತಿಂಗಳ ಬಳಿಕ ಸಂಪುಟಕ್ಕೆ ಮೇಜರ್‌ ಸರ್ಜರಿ ಮಾಡುವ ಆಲೋಚನೆಯಿದೆ. ಈ ಪ್ರಕ್ರಿಯೆ ಕೈಗೊಳ್ಳಲು ಮುಖ್ಯಮಂತ್ರಿಯಾಗಿ ಸಹಕರಿಸಬೇಕು ಎಂಬ ಪ್ರಸ್ತಾಪವನ್ನೂ ಗೃಹ ಸಚಿವರು ಕೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ತಮ್ಮನ್ನು ಉಚ್ಚಾಟಿಸಲಿ ಎಂದು ಜಿಟಿ ದೇವೇಗೌಡರೇ ಕಾಯುತ್ತಿದ್ದಾರೆ: ಹೆಚ್‌ಕೆ ಕುಮಾರಸ್ವಾಮಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights