ತನ್ನ ಒಂದೂವರೆ ವರ್ಷದ ಮಗಳನ್ನೇ ಕೊಂದ ತಂದೆ; ಮರಣದಂಡನೆ ವಿಧಿಸಿದ ಗದಗ ಕೋರ್ಟ್‌!

ತನ್ನ ಒಂದೂವರೆ ವ‍ರ್ಷದ ಮಗಳನ್ನೇ ಕತ್ತು ಹಿಸುಕಿ ಅಮಾನುಷವಾಗಿ ಕೊಲೆ ಮಾಡಿದ್ದ ಅಪರಾಧಿ ತಂದೆಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಗದಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರ ಗ್ರಾಮದ ಪ್ರಶಾಂತಗೌಡ ಪಾಟೀಲ್ ಎಂಬಾತ 2015ರಲ್ಲಿ ತನ್ನ ಪತ್ನಿಯ ಮೇಲಿನ ಕೋಪದಿಂದಾಗಿ ತನ್ನ 18 ತಿಂಗಳಿಗೆ ಅಸುಗೂಸನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಆತನಿಗೆ ಮರಣ ದಂಡನೆ ವಿಧಿಸಲಾಗಿದೆ.

ಅಪರಾಧಿಯು 2013ರಲ್ಲಿ ಅನ್ಯಧರ್ಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ, ವಿವಾಹಾ ನಂತರ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದ. ಇದರಿಂದಾಗಿ ನೊಂದ ಆತನ ಪತ್ನಿ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ವಾಸಿಸುತ್ತಿದ್ದರು. ಈ ವೇಳೆ ಆತ ವಿರುದ್ಧ ಜೀವನಾಂಶಕ್ಕಾಗಿ ಕೋರ್ಟ್‌ನಲ್ಲಿ ಕೇಸು ದಾಖಸಿದ್ದರು. ‘

ಇದರಿಂದಾಗಿ ಕೋಮಗೊಂಡ ಅತ, ತನ್ನ ಒಂದೂವರೆ ವರ್ಷದ ಮಗಳನ್ನು ಅಪಹರಿಸಿ 2015ರ ಏಪ್ರಿಲ್‌ 06 ರಂದು ಕೊಲೆ ಮಾಡಿ, ಸಾಕ್ಷ್ಯಾ ನಾಶಕ್ಕಾಗಿ ಮಗುವಿನ ಮೃತದೇಹವನ್ನೂ ಸುಟ್ಟು ಹಾಕಲು ಯತ್ನಿಸಿದ್ದ.

ಈ ಬಗ್ಗೆ ರೋಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿ, ಆತನೇ ಕೊಲೆಗಾರ ಎಂದು ಪೊಲೀಸರು ಸಾಬೀತು ಪಡಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯವು ಅಪರಾಧಿ ತಂದೆಗೆ ಮರಣದಂಡನೆ ವಿಧಿಸಿದೆ.

ಇದನ್ನೂ ಓದಿ: ಬಿಜೆಪಿ ಕಟ್-ಮನಿ ಸಂಸ್ಕೃತಿಯನ್ನು ಕೊನೆಗೊಳಿಸುತ್ತದೆ; ಅಕ್ರಮ ವಲಸಿಗರನ್ನು ತಡೆಯುತ್ತದೆ: ಅಮಿತ್‌ ಶಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights