ಕಟಕಟೆಗೆ ಸಿಡಿ ಲೇಡಿ ಬಂದರೆ.. ಅರೆಸ್ಟ್ ಆಗ್ತಾರಾ ಸಾಹುಕಾರ್? ಕಾಂಗ್ರೆಸ್ ಗೂ ಕಾದಿದಿಯಾ ಸಂಕಷ್ಟ?
27 ದಿನಗಳಿಂದ ಸಿಡಿ ಪ್ರಕರಣ ಹಲವಾರು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದಕ್ಕೆಲ್ಲ ಅಂತ್ಯ ಸಿಗಬೇಕು ಅಂದರೆ ಅಜ್ಞಾತ ಸ್ಥಳದಿಂದ ಯುವತಿ ಪ್ರತ್ಯಕ್ಷಳಾಗಬೇಕು. ಆಗ ಮಾತ್ರ ಈ ಪ್ರಕರಣದ ಸತ್ಯಾಸತ್ಯತೆಗಳ ಬಗ್ಗೆ ತಿಳಿಯೋದಕ್ಕೆ ಸಾಧ್ಯ.
ಆದರೆ ಸಿಡಿ ಲೇಡಿ ಮಾತ್ರ ಎಸ್ಐಟಿ ಮುಂದೆ ಹಾಜರಾಗಿ ತನ್ನ ಹೇಳಿಕೆಯನ್ನು ಕೊಡುತ್ತಿಲ್ಲ. ಒಂದು ವೇಳೆ ಸಿಡಿ ಲೇಡಿ ಬಂದರೆ ಯಾರಿಗೆ ಸಂಕಷ್ಟ ಎದುರಾಗಬಹುದು? ಹೀಗೊಂದು ಪ್ರಶ್ನೆ ಕಾಡದೇ ಇರದು. ಯಾಕೆಂದರೆ ಸಿಡಿ ಲೇಡಿ ಬಿಡುಗಡೆ ಮಾಡುತ್ತಿರುವ ವಿಡಿಯೋಗಳಿಗೂ ಪೋಷಕರೊಂದಿಗೆ ಮಾತನಾಡುತ್ತಿರುವ ಆಡಿಯೋಗಳಿಗೂ ಯಾವುದೇ ಸಂಬಂಧವಿಲ್ಲ. ಎರಡೂ ಹೇಳಿಕೆಗಳಿಗೂ ತಾಳೆಯಾಗುತ್ತಿಲ್ಲ.
ಸಹೋದರನೊಂದಿಗೆ ಫೋನ್ ಕರೆಯಲ್ಲಿ ಮಾತನಾಡುವಾಗ ಯುವತಿ ವಿಡಿಯೋ ನನ್ನದಲ್ಲಾ ಎನ್ನುತ್ತಾಳೆ. ಆದರೆ ವಿಡಿಯೋದಲ್ಲಿ ತಾನು ಮೋಸ ಹೋಗಿದ್ದೇನೆ ಎನ್ನುತ್ತಾಳೆ.
ಮತ್ತೊಂದು ಆಡಿಯೋದಲ್ಲಿ ನನಗೆ ಡಿಕೆ ಶಿವಕುಮಾರ್ ಇದ್ದಾರೆ ಎಂದಿದ್ದಾಳೆ. ವಿಡಿಯೋದಲ್ಲಿ ರಮೇಶ್ ಜಾರಕಿಹೊಳಿ ಯಿಂದ ಜೀವ ಬೆದರಿಕೆ ಇದೆ ಎಂದಿದ್ದಾಳೆ.
ಆಡಿಯೋದಲ್ಲಿ – ಡಿಕೆ ಶಿವಕುಮಾರ್ ಗೋವಾಕ್ಕೆ ಹೋಗಲು ದುಡ್ಡುಕೊಟ್ಟಿದ್ದಾರೆ ಎಂದರೆ, ವಿಡಿಯೋದಲ್ಲಿ- ನನಗೆ ಯಾರ ರಾಜಕಾರಣಿಗಳ ಸಹಕಾರ ಇಲ್ಲ. ನನಗೆ ನನ್ನ ತಂದೆ ತಾಯಿಗೆ ರಕ್ಷಣೆ ಕೊಡಿ ಎಂದಿದ್ದಾಳೆ.
ಆಡಿಯೋದಲ್ಲಿ- ಡಿಕೆ ಶಿವಕುಮಾರ್ ಹೇಳಿದಂತೆ ಕೇಳಬೇಕು ಎಂದರೆ. ವಿಡಿಯೋದಲ್ಲಿ – ನನಗೆ ಸಾಯಬೇಕು ಅನ್ನಿಸುತ್ತಿದೆ ಎಂದಿದ್ದಾಳೆ.
ಹೀಗೆ ಸಿಡಿ ಯುವತಿ ಆಡಿಯೋಕ್ಕೂ ವಿಡಿಯೋಕ್ಕೂ ಸಂಬಂಧವೇ ಇಲ್ಲ. ಗೊಂದಲದ ಹೇಳಿಕೆಗಳು ಇದರಲ್ಲಿವೆ. ಹೀಗಾಗಿ ಒಂದು ವೇಳೆ ಯುವತಿ ನ್ಯಾಯಾಧೀಶರ ಮುಂದ ಹಾಜರಾಗಿ ಡಿಕೆ ಶಿವಕುಮಾರ್ ಆಕೆಯನ್ನು ಬೆದರಿಸಿ ಇಟ್ಟಿದ್ದರು ಎನ್ನುವ ಹೇಳಿಕೆ ಕೊಟ್ಟಿದ್ದೇ ಆದರೆ ಕಾಂಗ್ರೆಸ್ ಅಲುಗಾಡುವುದು ಪಕ್ಕ. ಅಥವಾ ನನ್ನ ವಿಡಿಯೋ ನಿಜ ಎಂದು ಹೇಳಿದ್ದೇ ಆದರೆ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಕಾದಿದೆ.
ಹೀಗಾಗಿ ಯುವತಿ ಪತ್ತೆಗಾಗಿ ಆಕೆ ಕೊಡುವ ಹೇಳಿಕೆ ಮೇಲೆಯೇ ಎಲ್ಲವೂ ನಿರ್ಧಾರವಾಗಲಿವೆ. ಆದರೆ ಎಸ್ಐಟಿ ಯುವತಿ ಪತ್ತೆಗಾಗಿ ಇಡೀ ರಾಜ್ಯವನ್ನು ಸುತ್ತಿದರರೂ ಯುವತಿ ಪತ್ತೆಯಾಗಿಲ್ಲ. ಹೀಗಾಗಿ ಎಸ್ ಐಟಿಗೆ ಯುವತಿ ಪತ್ತೆ ತಲೆನೋವಾಗಿದೆ. ಇಷ್ಟೆಲ್ಲಾ ಆದರೂ ಯುವತಿ ಮಾತ್ರ ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್ ಮಾಡುತ್ತಲೇ ಇದ್ದಾಳೆ. ವಕೀಲರ ಮೂಲಕ ದೂರು ದಾಖಲಿಸುತ್ತಿದ್ದಾಳೆ. ಕೋರ್ಟ್ ಮುಂದೆ ಹಾಜರಾಗಲು ಅನುಮತಿ ಕೂಡ ಕೋರಿದ್ದಾಳೆ. ಇದಕ್ಕೆ ಕೋರ್ಟ್ ಕೂಡ ಅನುಮತಿ ನೀಡಿದೆ. ಆದರೆ ಯಾವಾಗ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗುತ್ತಾಳೋ ಯಾವ ಹೇಳಿಕೆ ಕೊಡುತ್ತಾಳೋ ಕಾದು ನೋಡಬೇಕಿದೆ.