ಇಂದು ಮಣಿಪಾಲ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಬಿ.ಎಸ್ ಯಡಿಯೂರಪ್ಪ!
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಗುಣಮುಖರಾಗಿ ಇಂದು ಮಣಿಪಾಲ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ಶುಕ್ರವಾರ 2ನೇ ಬಾರಿ ಕೊರೊನಾ ಸೋಂಕಿಗೆ ಒಳಗಾಗಿದ್ದು ಸಿಎಂ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಸದ್ಯ ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ಅವರು, ರೆಸ್ಟ್ ತಗೋಳೋ ಪ್ರಶ್ನೆಯೇ ಇಲ್ಲ. ಇಂದು ಸಂಜೆಯೇ ಸಚಿವ ಸಹೋದ್ಯೋಗಿಗಳ ಸಭೆ ಕರೆಯುತ್ತೇನೆ. ಕೋವಿಡ್ ನಿರ್ವಹಣೆಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದರು.
I have been discharged from the hospital today and I thank you all for your support and good wishes. pic.twitter.com/xhhHolBtEj
— B.S. Yediyurappa (@BSYBJP) April 22, 2021
ನಾನು ನಿರಂತರವಾಗಿ ಸಿಎಸ್, ಸಚಿವರ ಜೊತೆ ಸಂಪರ್ಕದಲ್ಲಿದ್ದೇನೆ. ಬಿಗಿಯಾದ ನಿಯಮಗಳನ್ನು ಕೈಗೊಂಡಿದ್ದೇವೆ. ಅದರ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೆನೆ. ಕೊರೊನಾ ದಿನೆ ದಿನೇ ಹೆಚ್ಚಾಗ್ರಿದೆ. ಒಂದು ಮನೆಯಲ್ಲಿ ಮೂರಿಂದ ನಾಲ್ಕು ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ.
ಮೊನ್ನೆಯಷ್ಟೇ ಪ್ರಧಾನಿ ಅವರು ಹೇಳಿದಂತೆ ಕೊರೊನಾ ಕೊನೆಯ ಅಸ್ತ್ರವಾಗಬೇಕು. ಮಾಸ್ಕ್, ಸಾಮಾಜಿಕ ಅಂತರ ಬಿಟ್ರೆ ಬೇರೆ ಪರಿಹಾರ ಇಲ್ಲ. ಜನ ಮನೆಯಿಂದ ಹೊರಗೆ ಬರಬಾರದು. ಅನಗತ್ಯವಾಗಿ ಹೊರಗೆ ಬರೋದು ಬೇಡ . ನಾವು ಕೂಡ ಬಿಗಿಯಾದ ಕ್ರಮ ಕೈಗೊಂಡಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.