ಬಿಗ್ ಬಾಸ್ ಮನೆಯಲ್ಲಿ ಮನಸ್ತಾಪಗಳೇ ಹೆಚ್ಚು – ಏನಂತಾರೆ ಕಿಚ್ಚ ಸುದೀಪ್?

ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಬ್ಬ ಸ್ಪರ್ಧಿಗಳ ನಡುವೆ ಮನಸ್ತಾಪಗಳೇ ಹೆಚ್ಚಾಗಿ ಹೋಗಿವೆ. ದಿವ್ಯಾ ಸುರೇಶ್ ಗೆ ಮಂಜು ಮೇಲೆ ಬೇಸರ, ಶುಭಾ ಪುಂಜಾಗೆ ನಿಧಿ ಸುಬ್ಬಯ್ಯ ಮೇಲೆ ಬೇಸರ, ರಘು ಮೇಲೆ ವೈಷ್ಣವಿಗೆ ಬೇಸರ, ದಿವ್ಯಾಗೆ ಅರವಿಂದ್ ಮೇಲೆ ಬೇಸರ, ಪ್ರಶಾಂತ್ ಮೇಲೆ ಚಕ್ರವರ್ತಿಗೆ ಬೇಸರ, ನಿಧಿಗೆ ಅರವಿಂದ್ ಮೇಲೆ ಬೇಸರ, ಪ್ರಿಯಾಂಕಾ ಮತ್ತು ಶಮಂತ್ ಇಬ್ಬರಿಗೂ ಚಕ್ರವರ್ತಿ ಮೇಲೆ ಬೇಸರ ಹೀಗೆ ಮನಸ್ತಾಪಗಳ ಮನೆಯಾಗಿದೆ ಬಿಗ್ ಬಾಸ್. ಈ ಜಗಳಗಳ ಮಧ್ಯೆ ಹೆಚ್ಚಾಗಿ ಸಿಕ್ಕಿಕೊಂಡಿದ್ದು ಶಮಂತ್. ಈ ಮನಸ್ತಾಪಗಳ ನಡುವೆ ಬಿಗ್ ಬಾಸ್ ಸೀಸನ್ 8ರಲ್ಲಿ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು ದಿವ್ಯ ಉರುಡುಗ ಅವರಿಗೆ ಕಿಚ್ಚ ಶುಭಾಶಯ ತಿಳಿಸಿದ್ದಾರೆ.

ಹೌದು.. ವೀಕೆಂಡ್ ನ್ನ ಸುದೀಪ್ ಈ ಬಾರೀ ಮನಸ್ತಾಪಗಳ ಮಾತಿನಲ್ಲೇ ಆರಂಭ ಮಾಡಿದ್ರು. ಮನೆಯ ಮನಸ್ತಾಪಗಳಿಗೆ ತೆರೆ ಎಳೆದ ಸುದೀಪ್, ಶುಭಾ ಪೂಂಜಾ ಹಾಗೂ ಅರವಿಂದ್, ಮಂಜು ಪಾವಗಡ ಹಾಗೂ ಚಕ್ರವರ್ತಿ ಪರಸ್ಪರ ಕ್ಷಮಿಸುವಂತೆ ಹೇಳಿದರು. ಇನ್ನೂ ಕಳಪೆ ಪ್ರದರ್ಶ ನೀಡಿದ್ದಾರೆಂದು ಶುಭಾ ಪುಂಜಾ ಜೈಲು ವಾಸ ಅನುಭವಿಸಿದ್ದು ದಿನವಿಡೀ ಕಣ್ಣೀರಿಟ್ಟಿದ್ದು ಇಲ್ಲಿ ಪ್ರಸ್ತಾಪಿಸಲಾಯಿತು. ತಾವು ಮಾಡುವ ತಪ್ಪುಗಳು, ಮಾತುಗಳ ಮೇಲೆ ನಿಗಾ ಇಡಲು ಸುದೀಪ್ ಎಚ್ಚರಿಸಿದರು.

ಕಿಚ್ಚನ ಮಾತು ಮುಗಿಯುತ್ತಿದ್ದಂತೆ ಪ್ರಶಾಂತ್ ಮತ್ತು ದಿವ್ಯ ಸುರೇಶ್ ಕೈ ಕೈ ಮಿಲಾಯಿಸಿ ಪರಸ್ಪರ ಕ್ಷಮೆ ಕೇಳಿದರು. ಆದರೆ ಇನ್ನೂ ಕೆಲ ಸ್ಪರ್ಧಿಗಳ ನಡುವೆ ಮನಸ್ತಾಪಗಳು ಬೂದಿ ಮುಚ್ಚಿದ ಕೆಂಡದಂತಿದ್ದು ಯಾರು ಯಾವಾಗ ಬೆಂಕಿ ಉಗುಳುತ್ತಾರೋ ಕಾದು ನೋಡಬೇಕಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights